ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಸ್ಸಾಮಿ ಲೇಖಕಿ ಇಂದಿರಾ ಗೋಸ್ವಾಮಿಗೆ ಜ್ಞಾನಪೀಠ ಪ್ರಶಸ್ತಿ
ನವದೆಹಲಿ : ಭಾರತೀಯ ಸಾಹಿತ್ಯ ಲೋಕಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಹೆಸರಾಂತ ಅಸ್ಸಾಮಿ ಲೇಖಕಿ ಇಂದಿರಾ ಗೋಸ್ವಾಮಿ ಅವರಿಗೆ 2000 ಸಾಲಿನ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ಶನಿವಾರ ರಾಜ್ಯಸಭಾ ಸದಸ್ಯ ಎಲ್.ಎಂ. ಸಿಂಘ್ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಆಯ್ಕೆ ಮಂಡಳಿ ಸಭೆಯಲ್ಲಿ ಸಾಹಿತ್ಯ ಕ್ಷೇತ್ರದ ಪರಮೋಚ್ಚ ಪ್ರಶಸ್ತಿಗೆ ಇಂದಿರಾ ಗೋಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 5 ಲಕ್ಷ ರುಪಾಯಿ ನಗದು, ಪ್ರಶಸ್ತಿ ಫಲಕ, ವಾಗ್ದೇವಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ.
ಇಂದಿರಾ ಗೋಸ್ವಾಮಿ ಅವರು, ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಎರಡನೇ ಅಸ್ಸಾಮಿ ಸಾಹಿತಿಯಾಗಿದ್ದಾರೆ. ಹಲವು ಸಣ್ಣ ಕಥೆಗಳ ಸಂಕಲನ ಹೊರತಂದಿರುವ ಇಂದಿರಾ ಗೋಸ್ವಾಮಿ ಅವರು, ಭಾರತೀಯ ಸಾಹಿತಿಗಳ ಸಾಲಿನಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Sunday, July 29, 2001, 5:30 [IST]