ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿ: ತೋಟದ ಮನೆಯಲ್ಲಿ ಡಕಾಯಿತಿ- 3.5 ಲಕ್ಷ ರು. ದರೋಡೆ

By Staff
|
Google Oneindia Kannada News

ತುಮಕೂರು : ಮನೆಯ ಮಾಲಿಕರ ಪುತ್ರ ಹಾಗೂ ಕಾವಲುಗಾರನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ 7-8 ಜನರಿದ್ದ ಡಕಾಯಿತರ ತಂಡ 60 ಸಾವಿರ ರುಪಾಯಿ ನಗದೂ ಸೇರಿದಂತೆ, 3.5 ಲಕ್ಷ ರುಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ತುಮಕೂರು ಜಿಲ್ಲೆಯ ಗುಬ್ಬಿಯ ಬಳಿ ಸಂಭವಿಸಿದೆ.

ತುಮಕೂರು - ಹೊನ್ನಾವರ ಹೆದ್ದಾರಿಯ ಪಕ್ಕದಲ್ಲೇ ಇರುವ ಪತ್ರೆಮತಿಗಟ್ಟ ಗ್ರಾಮದ ಬಸವರಾಜ ಪತ್ರೆ ಎಂಬುವವರ ತೋಟದ ಮನೆಗೆ ನುಗ್ಗಿದ ಡಕಾಯಿತರ ತಂಡ, ಕಾವಲುಗಾರ ಹಾಗೂ ಮನೆಯ ಮಾಲಿಕರ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.

ರಾತ್ರಿ 1.50ರ ಸುಮಾರಿನಲ್ಲಿ ಮನೆಯ ಕಾವಲುಗಾರ ಕೃಷ್ಣಪ್ಪನ ಮೇಲೆ ಮೊದಲು ಮಚ್ಚು ಹಾಗೂ ದೊಡ್ಡೆಯಿಂದ ಹಲ್ಲೆ ನಡೆಸಿದ ಡಕಾಯಿತರು, ಬಾಗಿಲು ಮುರಿದು ಒಳಹೊಕ್ಕರು. ಸುಮಾರು ಅರ್ಧ, ಮುಕ್ಕಾಲು ಗಂಟೆ ಮನೆಯಲ್ಲಿದ್ದ ಸಾಮಾನುಗಳೆಲ್ಲವನ್ನೂ ಜಾಲಾಡಿ, ಬೆಲೆಬಾಳುವ ವಸ್ತುಗಳನ್ನು ದೋಚಿದರು. ಈ ಗಲಾಟೆ ಕೇಳಿ ಹೊರಬಂದ ಬಸವರಾಜ್‌ ಅವರ ಪುತ್ರ ದಿನೇಶ್‌ನ ಮೇಲೂ ಡಕಾಯಿತರು ಹಲ್ಲೆ ನಡೆಸಿದರು.

ಮನೆಯವರ ಕೈಕಾಲು ಕಟ್ಟಿ, ಬೀರು ಬಾಗಿಲು ಮುರಿದು ರೇಷ್ಮೆ ಸೀರೆಗಳು, ಒಡವೆ ವಸ್ತುಗಳೆಲ್ಲವನ್ನೂ ದೋಚಿದರು. ಹಿರಿಯ ಪೊಲೀಸ್‌ ಅಧಿಕಾರಿ ಆರ್‌. ಹಿತೇಂದ್ರ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗುಬ್ಬಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X