ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿ ಗಣೇಶನ್‌ಗೆ ಮರಣೋತ್ತರ ಭಾರತರತ್ನ ಕೊಡಿ -ಸರೋಜಾದೇವಿ

By Staff
|
Google Oneindia Kannada News

ಬೆಂಗಳೂರು : ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿಜೇತ ತಮಿಳು ಚಿತ್ರನಟ ಶಿವಾಜಿ ಗಣೇಶನ್‌ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಹಿರಿಯ ಚಲನಚಿತ್ರ ಕಲಾವಿದೆ ಬಿ. ಸರೋಜ ದೇವಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಅವರು ನಗರದಲ್ಲಿ ಶುಕ್ರವಾರ, ಶಿವಾಜಿ ಗಣೇಶನ್‌ ಅಭಿಮಾನಿಗಳ ಸಂಘ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. ಉತ್ತಮ ನಟರಾಗಿದ್ದ ಶಿವಾಜಿ ಗಣೇಶನ್‌ ತಾವು ನಟಿಸುತ್ತಿದ್ದ ಪ್ರತಿಯಾಂದು ಪಾತ್ರವನ್ನು ನಿರರ್ಗಳವಾಗಿ ಅಭಿನಯಿಸುತ್ತಿದ್ದರು. ಆ ಪಾತ್ರಗಳಿಗೆ ಜೀವ ತುಂಬುತ್ತಿದ್ದರು ಎಂದ ಸರೋಜಾ ದೇವಿ, ಶಿವಾಜಿ ಗಣೇಶನ್‌ ಜೊತೆಯಲ್ಲಿ ತಾವು ನಟಿಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಚಿತ್ರನಟಿ ಜಯಂತಿ, ಶಾಸಕ ಮುನಿಸ್ವಾಮಿ, ರಾಜ್ಯ ಚಲನಚಿತ್ರ ಮಂಡಳಿಯ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರಶೇಖರ್‌ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X