Get Updates
Get notified of breaking news, exclusive insights, and must-see stories!

ಕೊಲ್ಲೂರು ಮೂಕಾಂಬಿಕೆಗೆ ಜನವರಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕುಂದಾಪುರ : ಕೊಲ್ಲೂರು ಮೂಕಾಂಬಿಕಾ ದೇವಾಲಯದ ಅಷ್ಟಬಂಧ ಮಹಾ ಬ್ರಹ್ಮಕಲಶೋತ್ಸವವನ್ನು ಬರುವ ಜನವರಿಯಲ್ಲಿ ನಡೆಸಲಾಗುವುದು ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುವ ಈ ಅಪರೂಪದ ಕಲಶೋತ್ಸವಕ್ಕೆ ಅಸಂಖ್ಯ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ದಶಕದ ಬಳಿಕ ನಡೆವ ಈ ಉತ್ಸವಕ್ಕೆ ತಯಾರಿ ಈಗಾಗಲೇ ಶುರುವಾಗಿದೆ. ದೇವಸ್ಥಾನದ ಅಕ್ಕ ಪಕ್ಕ ವಿಶಾಲವಾದ ಜಾಗ ಇರಬೇಕೆಂಬ ದೃಷ್ಟಿಯಿಂದ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗುವಂತೆ 2.97 ಹೆಕ್ಟೇರ್‌ ಪ್ರದೇಶವನ್ನು ಖರೀದಿಸಲಾಗಿದೆ. ಈ ಜಾಗದಲ್ಲಿ ವಿಶಾಲವಾದ ಕೆಎಸ್ಸಾರ್ಟಿಸಿ ಬಸ್‌ ಸ್ಟಾಂಡ್‌ ಹಾಗೂ ಪ್ರವಾಸೀ ಮಂದಿರವನ್ನು ನಿರ್ಮಿಸಲಾಗುತ್ತಿದೆ.

ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ಕಮಾನು ದ್ವಾರ ಈ ವರ್ಷಾಂತ್ಯದೊಳಗೆ ರೆಡಿಯಾಗಲಿದೆ. ದೇವಸ್ಥಾನದ ಕಳೆದ ವರ್ಷದ ಆದಾಯ 9 ಕೋಟಿ ರೂಪಾಯಿಗಳಾಗಿದ್ದು, ಏಳು ಕೋಟಿ ರೂಪಾಯಿಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+