Get Updates
Get notified of breaking news, exclusive insights, and must-see stories!

ಹೆಣ್ಣುಶಿಶು ಮಾರಾಟ : ಆರೋಪಿ ಸಾವಿತ್ರಿನ್ಯಾಯಾಲಯಕ್ಕೆ ಶರಣು

ಹೈದರಾಬಾದ್‌ : ಹೆಣ್ಣು ಮಕ್ಕಳ ದತ್ತು - ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರಪ್ರದೇಶ ಪೊಲೀಸರಿಗೆ ಬೇಕಾಗಿದ್ದ, ಪ್ರಮುಖ ಆರೋಪಿ ಸಾವಿತ್ರಮ್ಮ ಕೊನೆಗೂ ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಶರಣಾಗಿದ್ದಾಳೆ.

ಕಳೆದ ಏಪ್ರಿಲ್‌ ತಿಂಗಳಿನಿಂದಲೂ ಪೊಲೀಸರಿಗೆ ಸಿಗದೆ ತಲೆತಪ್ಪಿಸಿಕೊಂಡಿದ್ದ ಈಕೆ, ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗಿರುವುದು ಪೊಲೀಸರಿಗೆ ಆಶ್ಚರ್ಯ ತಂದಿದೆ. ಆರೋಪಿಯನ್ನು ಆಗಸ್ಟ್‌ 18ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಲಯ ಆದೇಶಿಸಿದೆ.

ಬುರ್ಕಾ ಧರಿಸಿ, ಯಾರಿಗೂ ತನ್ನ ಗುರುತು ತಿಳಿಯದಂತೆ, ವಕೀಲರೊಂದಿಗೆ ಗುರುವಾರ ಇಲ್ಲಿನ ನಾಂಪಲ್ಲಿ ಅಪರಾಧ ನ್ಯಾಯಾಲಯಕ್ಕೆ ಆಗಮಿಸಿದ ಸಾವಿತ್ರಿ ಅಲಿಯಾಸ್‌ ಸಾವಿತ್ರಿಬಾಯಿ ಅಲಿಯಾಸ್‌ ಸ್ಯಾಮ್ಸನ್‌ ಅಲಿಯಾಸ್‌ ಸಾವಿತ್ರಮ್ಮ ನ್ಯಾಯಾಲಯಕ್ಕೆ ಶರಣಾಗುವುದಾಗಿ ಅರಿಕೆ ಮಾಡಿಕೊಂಡಳು.

ಈಕೆಯನ್ನು ಗುರುತಿಸುವಂತೆ ನ್ಯಾಯಮೂರ್ತಿ ಆನಂದರಾವ್‌ ಅವರು, ಸಿ.ಐ.ಡಿ. ವಿಭಾಗದ ಪೊಲೀಸರನ್ನು ಕರೆಸಿದಾಗಲೇ ಪೊಲೀಸರಿಗೆ ಈ ವಿಷಯ ತಿಳಿದದ್ದು. ದತ್ತು ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಕೆಯನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.

ಗ್ರಾಮಗಳ ಸುಧಾರಣೆ: (ಬೆಂಗಳೂರು ವರದಿ) ಹೆಣ್ಣು ಶಿಶುಗಳ ಮಾರಾಟ ಆಗುತ್ತಿದ್ದ ಗುಲ್ಬರ್ಗಾದ ಚಿಂಚೋಳಿ ತಾಲೂಕಿನ ಕೊಂಚಾವರಂ ಹೋಬಳಿಯ ಗ್ರಾಮ ಹಾಗೂ ತಾಂಡಾಗಳಲ್ಲಿ ಆಶ್ರಮ, ಶಾಲೆ, ಕಾಲೇಜು, ವಸತಿ ನಿಲಯ ಹಾಗೂ ಮನೆ ನಿರ್ಮಾಣ ಮಾಡಿ, ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರುವ ಮೂಲಕ ಗ್ರಾಮಗಳ ಸುಧಾರಣೆ ಮಾಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಕೊಂಚಾವರಂ ಹೋಬಳಿಯ 26 ಗ್ರಾಮಗಳು ಹಾಗೂ ತಾಂಡಾಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಹೆಚ್ಚುವರಿಯಾಗಿ 20 ಲಕ್ಷ ರುಪಾಯಿ, ಸಮಗ್ರ ಬಂಜರು ಭೂಮಿ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅವರು ವಿಧಾನ ಸಭೆಯಲ್ಲಿ ಗುರುವಾರ ತಿಳಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+