ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಜ್ಞಾತವಾಸ ಮುಗಿಯಿತು’- ಮೈಸೂರಿನಲ್ಲಿ ದೇವೇಗೌಡರ ಘೋಷಣೆ

By Staff
|
Google Oneindia Kannada News

ಮೈಸೂರು : ‘ದೇವರ ದಯದಿಂದ ಒದಗಿದ್ದ ಸಂಕಷ್ಟಗಳೆಲ್ಲ ಪರಿಹಾರವಾಗಿವೆ. ಆರೋಗ್ಯವೂ ಸುಧಾರಿಸಿದೆ. ಅಜ್ಞಾತವಾಸ ಮುಗಿದಿದ್ದು , ಇನ್ನು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಭಾಗವಹಿಸುತ್ತೇನೆ’.

ದೇವೇಗೌಡರ ಮುಖದಲ್ಲಿ ತೆಳುನಗೆ ಹರಡಿತ್ತು . ಮಾತುಗಳಲ್ಲಿ ಯಾವತ್ತಿನ ಹುಮ್ಮಸ್ಸು , ಆತ್ಮ ವಿಶ್ವಾಸ ಹಾಗೂ ಸಾಧಿಸಿಯೇ ತೀರುವ ಕೆಚ್ಚು . ಕೆಲವು ದಿನಗಳ ಕಾಲ ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಗಳ ಕಾರಣ ಸಕ್ರಿಯ ರಾಜಕಾರಣದಿಂದ ದೂರವಿದ್ದ ದೇವೇಗೌಡ ಗುರುವಾರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮತ್ತೆ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದರು.

ಇಷ್ಟಕ್ಕೂ ದೇವೇಗೌಡ ರಾಜಕೀಯದಿಂದ ದೂರವಿದ್ದುದು ಯಾವತ್ತು ?
ಅವರಿಗೆ ರಾಜಕೀಯ ಬಿಟ್ಟು ಏನೂ ಗೊತ್ತಿಲ್ಲ . ದಿನ ಬೆಳಗಾಗುವುದು ಮುಗಿಯುವುದೂ ರಾಜಕೀಯದೊಂದಿಗೆ ಎನ್ನುತ್ತಾರೆ ಅಭಿಮಾನಿಗಳು. ಇದು ಸುಳ್ಳೇನೂ ಅಲ್ಲ . ಆದರೆ ಈಚಿನ ದಿನಗಳಲ್ಲಿ ಆರೋಗ್ಯ ಅವರನ್ನು ಕಟ್ಟಿ ಹಾಕಿತ್ತು . ಮೊನ್ನೆಯಷ್ಟೇ ಅಮೇರಿಕಾ ಪ್ರವಾಸವನ್ನೂ ಗೌಡರು ಮುಗಿಸಿ ಮರಳಿದ್ದಾರೆ. ಅಲ್ಲಿನ ಕನ್ನಡ ಬಂಧುಗಳೊಂದಿಗೆ ಒಂದಾಗಿ ಬೆರೆತಿದ್ದಾರೆ, ಬೆರಗಾಗಿದ್ದಾರೆ.

ದೇವೇಗೌಡ ಈಗ ಮತ್ತೆ ಗೆಲುವಾಗಿದ್ದಾರೆ. ಅವರೇ ಹೇಳುವಂತೆ ಕುಟುಂಬದ ಹಾಗೂ ಆರೋಗ್ಯದ ಸಮಸ್ಯೆಗಳು ಮುಗಿದವು. ಅಜ್ಞಾತವಾಸವೂ ಮುಗಿದಿದೆ. ಇನ್ನು ಮುಂದೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಗೌಡರು ಸ್ಪಷ್ಟವಾಗಿ ಹೇಳುತ್ತಾರೆ.

ಸದ್ಯಕ್ಕೆ ಗೌಡರ ಆದ್ಯತೆ ಪಕ್ಷವನ್ನು ಬಲಪಡಿಸುವುದು ಹಾಗೂ ಜನಸೇವೆ. ರಾಷ್ಟ್ರ ಹಾಗೂ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ ಎಂದು ಗೌಡರು ಹೇಳುವಾಗ ಹುಮ್ಮಸ್ಸು ಅವರ ಮಾತುಗಳಲ್ಲಿ ತುಳುಕುತ್ತದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X