ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಪಾಕ್‌ಗೆ ಹೋಗುವುದರಲ್ಲಿ ಅರ್ಥವಿಲ್ಲ- ಆರ್‌.ಎಸ್‌.ಎಸ್‌

By Staff
|
Google Oneindia Kannada News

ನವದೆಹಲಿ : ಪ್ರಸ್ತುತ ಸನ್ನಿವೇಶದಲ್ಲಿ ಶಾಂತಿ ಮಾತುಕತೆ ನಡೆಸಲು ಪ್ರಧಾನಿ ಅಟಲ್‌ ಬಿಹಾರ್‌ ವಾಜಪೇಯಿ ಪಾಕಿಸ್ತಾನಕ್ಕೆ ಸುತಾರಾಂ ಹೋಗಕೂಡದೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸೋಮವಾರ ಹೇಳಿದೆ.

ಆಗ್ರಾ ಶೃಂಗಸಭೆಯ ಫಲಿತಾಂಶದಿಂದ ನಮಗೇನೂ ಅಚ್ಚರಿಯಾಗಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಪ್ರಧಾನಿ ವಾಜಪೇಯಿ ಪಾಕಿಸ್ತಾನಕ್ಕೆ ಹೋಗಿ, ಮುಷರ್ರಫ್‌ ಜೊತೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆರ್‌.ಎಸ್‌.ಎಸ್‌ ವಕ್ತಾರ ಎಂ.ಜಿ.ವೈದ್ಯ ಅಭಿಪ್ರಾಯ ಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ದುರಂತಗಳನ್ನು ನೋಡಿಯೂ, ಅದನ್ನು ಸ್ವಾತಂತ್ರ್ಯ ಹೋರಾಟ ಎನ್ನುವ ಮುಷರ್ರಫ್‌ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಜೊತೆಗೆ ಕಾಶ್ಮೀರ ಭಾರತದ ಆಂತರಿಕ ಸಮಸ್ಯೆಯೂ ಹೌದು. ಇದರಲ್ಲಿ ಪಾಕಿಸ್ತಾನ ಹೆಚ್ಚೇನೂ ಮಾಡಲಾರದು. ಭಾರತದ ರಕ್ಷಣಾ ಪಡೆಗಳು ಭಯೋತ್ಪಾದಕರ ಪಾಕಿಸ್ತಾನೀ ಬುಡ ಪತ್ತೆ ಮಾಡಿ, ಅದನ್ನು ಕಿತ್ತೆಸೆಯಬೇಕು ಎಂದು ವೈದ್ಯ ಕರೆ ಕೊಟ್ಟಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X