ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಗ್ಧರ ಕಗ್ಗೊಲೆ ‘ಜೆಹಾದ್’ ಎಂದು ವೈಭವೀಕರಣ- ವಾಜಪೇಯಿ ಟೀಕೆ
ನವದೆಹಲಿ : ಆಗ್ರಾ ಶೃಂಗಸಭೆಯ ನಂತರ ಪ್ರಕ್ಷುಬ್ಧ ಕಾಶ್ಮೀರ ಕೊಳ್ಳದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿರುವ ಬಗೆಗೆ ಭಾರತ ಮಂಗಳವಾರ(ಜುಲೈ 24) ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಮುಗ್ಧ ಪುರುಷ- ಮಹಿಳೆಯರು ಹಾಗೂ ಮಕ್ಕಳನ್ನು ಪ್ರತಿದಿನ ಕೊಲ್ಲುತ್ತಿದ್ದು , ಈ ಭಯೋತ್ಪಾದಕ ಕೃತ್ಯಗಳನ್ನು ಜೆಹಾದ್ ಎಂದು ವೈಭವೀಕರಿಸಲಾಗುತ್ತಿದೆ. ಇನ್ನೊಂದೆಡೆ ಭಾರತದೊಂದಿಗೆ ಶಾಂತಿಯ ಮಾತುಕತೆಗಳನ್ನು ಮುಂದುವರಿಸುವ ಮಾತುಗಳನ್ನೂ ಪಾಕಿಸ್ತಾನ ಆಡುತ್ತಿದೆ ಎಂದು ಪ್ರಧಾನಿ ವಾಜಪೇಯಿ ಉಭಯ ಸದನಗಳಲ್ಲಿ ಹೇಳಿದರು.
ಗಡಿ ಭಾಗದಲ್ಲಿನ ಭಯೋತ್ಪಾದಕತೆಯನ್ನು ಕೊನೆಗಾಣಿಸಲು ಪಾಕ್ ನಿರಾಕರಿಸಿರುವುದೇ ಉಪಖಂಡದಲ್ಲಿನ ಅಶಾಂತಿಗೆ ಕಾರಣವಾಗಿದೆ. ಈ ಎಲ್ಲ ಭಿನ್ನಮತಗಳಿದ್ದಾಗ್ಯೂ ಮಾತುಕತೆಗಳನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು. ಆಗ್ರಾ ಶೃಂಗಸಭೆಯಲ್ಲಿ ಯಾವುದೇ ನಿಶ್ಚಿತ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದರೂ ಪರಸ್ಪರ ಉಭಯತ್ರರು ಅರ್ಥೈಸಿಕೊಳ್ಳಲು ಶೃಂಗಸಭೆ ಕಾರಣವಾಯಿತು ಎಂದು ವಾಜಪೇಯಿ ಹೇಳಿದರು.
(ಯುಎನ್ಐ)
Comments
Story first published: Tuesday, July 24, 2001, 5:30 [IST]