ಕ್ರೋನಿಯೆ ಪಾಲಿಗಿನ್ನು ಕ್ರಿಕೆಟ್ ಇಲ್ಲವೇ ಇಲ್ಲ, ನೆರವಿಗೆ ಯಾರೂ ಇಲ್ಲ
ಡರ್ಬನ್ : ಕ್ರಿಕೆಟ್ ಮೋಸದಾಟ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಹ್ಯಾನ್ಸಿ ಕ್ರೋನಿಯೆ ಅವರ ಶಿಕ್ಷೆಯನ್ನು ಖಚಿತ ಪಡಿಸುವ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ದೀರ್ಘ ಕಾಲದ ಮೌನವನ್ನು ಮುರಿದಿದೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಮ್ಮೆ ಮಿಂಚುವ ಕ್ರೋನಿಯೆ ಅವರ ಎಲ್ಲ ಕನಸುಗಳು ಕೊನೆಗೊಂಡಿವೆ.
ಕ್ರೊನಿಯೆ ಅವರಿಗೆ ಕ್ಷಮೆ ಅಸಾಧ್ಯ ಎಂದು ಮಂಡಳಿಯ ಅಧ್ಯಕ್ಷ ಪರ್ಸಿ ಸನ್ ಮಂಗಳವಾರ ಪ್ರಕಟಿಸಿದರು. ಒಂದು ವೇಳೆ ಪ್ರಿಟೊರಿಯಾ ನ್ಯಾಯಾಲಯ ಕ್ರೋನಿಯೆ ಅವರ ಪರವಾಗಿ ತೀರ್ಪು ನೀಡಿದರೂ, ಕ್ರೋನಿಯೆ ಅವರ ಮೇಲೆ ಮತ್ತೊಮ್ಮೆ ಶಿಸ್ತು ಕ್ರಮವನ್ನು ಹೇರಲಾಗುವುದು ಎಂದು ಅವರು ಹೇಳಿದರು.
ಕಳೆದ 5 ವರ್ಷಗಳ ಅವಧಿಯಲ್ಲಿ 19 ಖಾತೆಗಳಲ್ಲಿ 120 ಡಿಪಾಸಿಟ್ಗಳನ್ನು ಕ್ರೋನಿಯೆ ನಮೂದಿಸಿದ್ದು , ಈ ಡಿಪಾಸಿಟ್ಗಳು 1.3 ಮಿಲಿಯನ್ ಡಾಲರ್ಗಳ ಮೌಲ್ಯವನ್ನು ಹೊಂದಿವೆ. ಆದರೆ, ಈ ಡಿಪಾಸಿಟ್ಗಳು ಅವರ ಸಂಬಳ ಅಥವಾ ಘೋಷಿತ ವರಮಾನದ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎನ್ನುವ ತನಿಖಾ ವರದಿ ಲಂಡನ್ನ ಸಂಡೇ ಟೈಮ್ಸ್ನಲ್ಲಿ ಪ್ರಕಟವಾದ ಬೆನ್ನಿಗೇ ಕ್ರಿಕೆಟ್ ಮಂಡಳಿಯ ತೀರ್ಮಾನ ಹೊರಬಿದ್ದಿದೆ.
ಸಂಡೆ ಟೈಮ್ಸ್ನಲ್ಲಿ ಪ್ರಕಟವಾಗಿರುವ ತನಿಖಾ ವರದಿಯ ಸತ್ಯಾಸತ್ಯತೆಯನ್ನು ತಳ್ಳಿಹಾಕಿರುವ ಕ್ರೋನಿಯೆ, ಅದೊಂದು ಬೇಜವಾಬ್ದಾರಿಯುತ ವರದಿ ಎಂದು ಬಣ್ಣಿಸಿದ್ದಾರೆ. ಈ ನಡುವೆ ಕ್ರೋನಿಯೆ ಅವರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಮಂಡಳಿಯ ಹಲವಾರು ಮಾಜಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದು, ಕಾನೂನು ಹೋರಾಟದಲ್ಲಿ ಕೂಡ ಕ್ರೋನಿಯೆ ಗೆಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications