ಪಾಕ್ನ ಹಠಮಾರಿತನವೇ ಮಾತುಕತೆ ವೈಫಲ್ಯಕ್ಕೆ ಕಾರಣ -ಅಟಲ್
ನವದೆಹಲಿ : ಗಡಿಯಾಚೆಯ ಭಯೋತ್ಪಾದನೆ ನಿಗ್ರಹದ ಯಾವುದೇ ಪ್ರಸ್ತಾವವನ್ನು ಖಂಡತುಂಡವಾಗಿ ತಿರಸ್ಕರಿಸಿ, ಕಾಶ್ಮೀರವನ್ನೇ ಪ್ರಮುಖ ವಿಷಯವನ್ನಾಗಿಸಲು ಪಟ್ಟು ಹಿಡಿದ ಪಾಕಿಸ್ತಾನವೇ ಮಾತುಕತೆ ವೈಫಲ್ಯಕ್ಕೆ ಸಂಪೂರ್ಣ ಹೊಣೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಗ್ರಾ ಶೃಂಗ ಸಭೆಯ ನಂತರದ ಪ್ರಥಮ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
ಗಡಿಯಾಚೆಯ ಭಯೋತ್ಪಾದನಾ ಕೃತ್ಯಗಳನ್ನು ಸ್ವಾತಂತ್ರ್ಯ ಹೋರಾಟವೆಂದೇ ಪಾಕ್ ಅಧ್ಯಕ್ಷ ಜನರಲ್ ಮುಷರ್ರಪ್ ಪದೇ ಪದೇ ಹೇಳುತ್ತಾರೆ. ಅಲ್ಲದೆ ಕಾಶ್ಮೀರದ ವಿಷಯ ಇತ್ಯರ್ಥವಾಗದ ಹೊರತು ಎರಡೂ ರಾಷ್ಟ್ರಗಳ ಸಂಬಂಧ ಸುಧಾರಣೆಗೊಳ್ಳದೆಂಬ ಇಸ್ಲಾಮಾಬಾದ್ನ ಆಗ್ರಹ, ಕಗ್ಗಂಟಿಗೆ ಇನ್ನೊಂದು ಕಾರಣ ಎಂದ ಪ್ರಧಾನಿ ಕರಡು ಹೇಳಿಕೆಗೆ ಸಹಿ ಹಾಕುವ ಹಂತಕ್ಕೆ ಬಂದಿದ್ದೆವು ಎಂಬ ಆದೇಶದ ಪ್ರತಿಪಾದನೆಯನ್ನು ತಳ್ಳಿ ಹಾಕಿದರು. ನಿಯೋಗ ಮಟ್ಟದ ಮಾತುಕತೆಯಲ್ಲಿ ಮಾತ್ರ ಇದನ್ನು ಚರ್ಚಿಸಲಾಗಿದೆ ಎಂದು ಅವರು ವಿವರಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಅವರಿಂದಾಗಿ ಮಾತುಕತೆ ವಿಫಲವಾಗಿದೆ ಎಂಬ ಆಪಾದನೆಗಳನ್ನು ತಿರಸ್ಕರಿಸುತ್ತಾ ಪ್ರಧಾನಿ, ಮಾತುಕತೆ ವೇಳೆ ಸಂಪುಟ ಮಟ್ಟದ ಬೈಠಕ್ಗಳು ನಡೆದಿವೆ. ಯಾವುದಾದರೂ ಲೋಪವಿದ್ದರೆ ಸಚಿವ ಸಂಪುಟದ ಮುಖ್ಯಸ್ಥನಾಗಿ ಅದು ನನ್ನದೇ ತಪ್ಪು ಎಂದರು.
(ಇನ್ಫೋ ವಾರ್ತೆ)