ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾನ್ಸೂನ್ ಅಧಿವೇಶನ ಪ್ರಾರಂಭ: ನೇಪಾಳ ಹತ್ಯಾಕಾಂಡಕ್ಕೆ ಸಂತಾಪ
ನವದೆಹಲಿ : ದೊರೆ ಬೀರೇಂದ್ರ ಹಾಗೂ ರಾಜ ಕುಟುಂಬದ ಇತರ ಸದಸ್ಯರ ಹತ್ಯಾಕಾಂಡಕ್ಕೆ ಪ್ರತ್ಯೇಕ ಸಂತಾಪ ಸೂಚಕ ನಿರ್ಣಯಗಳನ್ನು ಕೈಗೊಳ್ಳುವುದರೊಂದಿಗೆ ಸೋಮವಾರ ಪ್ರಾರಂಭವಾದ ಮಾನ್ಸೂನ್ ಅಧಿವೇಶನದ ಲೋಕಸಭೆ ಹಾಗೂ ರಾಜ್ಯಸಭೆಯ ಮೊದಲ ದಿನದ ಕಲಾಪಗಳು ಕೊನೆಗೊಂಡವು. ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಮಾಜಿ ಹಾಗೂ ಹಾಲಿ ಸಂಸದರ ನಿಧನಕ್ಕೂ ಉಭಯ ಸದನಗಳು ಶೋಕ ವ್ಯಕ್ತಪಡಿಸಿದವು. ನೇಪಾಳ ರಾಜಕುಟುಂಬ ಹತ್ಯಾಕಾಂಡದ ದುರಂತದ ಬಗೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವ ಹಾಗೂ ಅಲ್ಲಿನ ಜನತೆ, ಸರ್ಕಾರಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸಂದೇಶವನ್ನು ಸ್ಪೀಕರ್ ಜಿ.ಎಂ.ಸಿ. ಬಾಲಯೋಗಿ ಲೋಕಸಭೆಯಲ್ಲಿ ಓದಿದರು.
ಮಂಗಳವಾರ ಮರು ಸಮಾವೇಶಗೊಳ್ಳುವ ಕಲಾಪದಲ್ಲಿ ಮುಖಪುಟ / ಇವತ್ತು... ಈ ಹೊತ್ತು...
Story first published: Monday, July 23, 2001, 5:30 [IST]