ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರಾವತಿ- ಅರಬ್ಬಿ ಸಂಗಮದಲ್ಲಿ ದೋಣಿ ಮುಳುಗಿ ಇಬ್ಬರ ಸಾವು

By Staff
|
Google Oneindia Kannada News

ಮಂಗಳೂರು : ನೇತ್ರಾವತಿ ಹಾಗೂ ಅರಬ್ಬಿ ಸಮುದ್ರ ಸಂಗಮಗೊಳ್ಳುವ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆಗೆಂದು ಹೋದ ಎರಡು ದೋಣಿಗಳು ಮುಳುಗಿ ಇಬ್ಬರು ಮೃತರಾಗಿದ್ದಾರೆ ಹಾಗೂ ಇತರ 8 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದ್ದು , ಉಳ್ಳಾಲ ಮೊಗವೀರ ಪಟ್ಣದ ನರೇಶ (30) ಹಾಗೂ ಪ್ರಕಾಶ ಬಂಗೇರಾ (35) ನೀರುಪಾಲಾದ ದುರ್ದೈವಿಗಳು.

ಜಲರಾಣಿ ಮತ್ತು ಮೇಘದೂತ ಎಂಬ ಎರಡು ದೋಣಿಗಳಲ್ಲಿ ಒಟ್ಟು 20 ಜನರ ತಂಡ ಮೀನುಗಾರಿಕೆಗೆ ಹೊರಟಿತ್ತು . ಉಳ್ಳಾಲ ಕೋಟೆಪುರದಿಂದ ಹೊರಟ ಈ ಎರಡು ದೋಣಿಗಳು ಅಳಿವೆ ಬಾಗಿಲಿನಲ್ಲಿ ಗಾಳಿಗೆ ಸಿಲುಕಿ ದುರಂತಕ್ಕೆ ಈಡಾದವು. ದಡದಲ್ಲಿದ್ದವರಲ್ಲಿ 7 ಮಂದಿ ಈಜಿ ದಡ ಸೇರಿದರೆ, ಉಳಿದ 5 ಮಂದಿಯನ್ನು ಸ್ಥಳೀಯರು ರಕ್ಷಿಸಿದರು.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದುರಂತದಲ್ಲಿ ಒಟ್ಟು 9.5 ಲಕ್ಷ ರುಪಾಯಿ ನಷ್ಟ ಸಂಭವಿಸಿದ್ದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ದುರಂತದ ಬಗೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

(ಮಂಗಳೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X