ಪರಾಶಕ್ತಿ ನೋಡಿದ ದಿನವೇ ಶಿವಾಜಿ ಅಭಿಮಾನಿಯಾಗಿಬಿಟ್ಟೆ- ಡಾ.ರಾಜ್
ಚೆನ್ನೈ : ನಟನೆ ಬಗ್ಗೆ ಯಾರೊಬ್ಬರು ಯೋಚಿಸಿದರೂ ಮನಸ್ಸಲ್ಲಿ ಮೂಡುವ ಮೊದಲ ಹೆಸರು ಶಿವಾಜಿ ಗಣೇಶನ್ ಅವರದ್ದು. ತಾವು ಅಭಿನಯಿಸಿದ ಎಲ್ಲಾ ಪಾತ್ರಗಳಿಗೂ ಜೀವತುಂಬಿದ ಮಹಾನ್ ನಟನಾತ. ನಾನು ಮೊದಲು ನೋಡಿದ ಅವರ ಅಭಿನಯದ ಚಿತ್ರ ಪರಾಶಕ್ತಿ. ಅಂದಿನಿಂದ ಅವರ ಅಭಿಮಾನಿಯಾದೆ. ಅಗಲಿದ ತಮಿಳು ಮೇರು ನಟ ಶಿವಾಜಿ ಗಣೇಶನ್ ಬಗ್ಗೆ ಕನ್ನಡದ ವರನಟ ಡಾ.ರಾಜ್ ಆಡಿದ ಮಾತುಗಳಿವು.
ಪತ್ನಿ ಪಾರ್ವತಮ್ಮ ಅವರೊಟ್ಟಿಗೆ ಚೆನ್ನೈಗೆ ಆಗಮಿಸಿದ ವರನಟ ರಾಜ್, ನೇರ ಟಿ.ನಗರದಲ್ಲಿರುವ ಶಿವಾಜಿ ಗಣೇಶನ್ ಅವರ ಮನೆಗೆ ಬಂದರು. ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿದ ರಾಜ್ ದಂಪತಿಗಳು ಪತಿಯ ಕಳಕೊಂಡ ದುಃಖದಲ್ಲಿರುವ ಕಮಲಮ್ಮ ಅವರಿಗೆ ಸಾಂತ್ವನ ಹೇಳಿದರು. ಶಿವಾಜಿ ಪುತ್ರ ಪ್ರಭು ಅವರಿಗೂ ಧೈರ್ಯ ತಂದುಕೊಳ್ಳುವಂತೆ ಹೇಳಿದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ, ಪಾಂಡಿಚೆರಿ ಮುಖ್ಯಮಂತ್ರಿ ಪಿ.ಷಣ್ಮುಗಂ, ಕೇಂದ್ರ ಸಚಿವ ಟಿ.ಆರ್.ಬಾಲು, ಟಿಎಂಸಿ ನಾಯಕ ಜಿ.ಕೆ.ಮೂಪನಾರ್ ಹಾಗೂ ಪಿಎಂಕೆ ವ್ಯವಸ್ಥಾಪಕ ಡಾ.ಎಸ್.ರಾಮದಾಸ್ ಮೊದಲಾದವರು ಶಿವಾಜಿ ಗಣೇಶನ್ ನಿವಾಸಕ್ಕೆ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವರನಟ ರಾಜ್, ತಾವು ಶೂಟಿಂಗ್ನಲ್ಲಿ ನಿರತರಾಗಿರುತ್ತಿದ್ದಾಗ, ಸೆಟ್ಗಳಲ್ಲಿ ಶಿವಾಜಿ ಅವರ ಅಭಿನಯ ನೋಡಿ ಅವಾಕ್ಕಾಗಿದ್ದೆ. ಅವರು ನಮ್ಮನ್ನೆಲ್ಲಾ ಅಗಲಿರುವುದು ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.
ಚಿತ್ರೋದ್ಯಮ ಸ್ಥಗಿತ : ತಮಿಳುನಾಡಿನ ಮೇರು ನಟ ಶಿವಾಜಿ ಅಗಲಿದ ಕಾರಣ, ಅವರಿಗೆ ಗೌರವ ಸೂಚಿಸುವ ಸಲುವಾಗಿ ಭಾನುವಾರ ರಾಜ್ಯದಲ್ಲಿ ಚಿತ್ರೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸೋಮವಾರ ಶಿವಾಜಿ ಗಣೇಶನ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವುದು.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications