ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಕುಲಾಷ್ಟಮಿ ಪ್ರಯುಕ್ತ ಒಡುಕತ್ತೂರು ಮಠದಲ್ಲಿ ಸಂಗೀತೋತ್ಸವ
ಬೆಂಗಳೂರು : ಶ್ರೀ ಗುರುವಾಯೂರಪ್ಪನ್ ಭಜನ್ ಸಮಾಜ ಟ್ರಸ್ಟ್ ಇಲ್ಲಿನ ಒಡುಕತ್ತೂರು ಮಠದಲ್ಲಿ ಜುಲೈ 21ರಿಂದ ಆಗಸ್ಟ್ 19ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವವನ್ನು ಆರಂಭಿಸಿದೆ.
ಟಿ.ಎನ್. ಶೇಷಗೋಪಾಲನ್ , ರಾಜಕುಮಾರ್ ಭಾರತಿ, ಸಂಜಯ್ ಸುಬ್ರಹ್ಮಣ್ಯನ್, ಹೈದರಾಬಾದ್ ಸಹೋದರರು, ಅನುರಾಧ ಶ್ರೀರಾಮ್ ಮತ್ತು ಶ್ರೀರಾಮ್ ಪರಶುರಾಮ್, ಪಿ. ಉನ್ನಿ ಕೃಷ್ಣನ್, ಮೈಸೂರು ಎಂ ಮಂಜುನಾಥ್ ಹಾಗೂ ಕೆ. ಎಸ್. ಗೋಪಾಲಕೃಷ್ಣನ್ ಸಂಗೀತೋತ್ಸವದಲ್ಲಿ ಕಚೇರಿ ನೀಡಲಿದ್ದಾರೆ.
ಗೋಕುಲಾಷ್ಟಮಿ ಪ್ರಯುಕ್ತ ಈ ಸಂಗೀತೋತ್ಸವವನ್ನು ಆಯೋಜಿಸಲಾಗಿದ್ದು, ಪ್ರತಿದಿನ ಸಂಗೀತೋತ್ಸವದ ಕಚೇರಿಯ ನಂತರ ರಾತ್ರಿ 9 ಗಂಟೆಗೆ ಶಿವಾಜಿ ನಗರ, ಇಂದಿರಾನಗರ, ತಿಪ್ಪಸಂದ್ರ, ದೊಮ್ಮಲೂರು ಮತ್ತು ಕೇಂಬ್ರಿಡ್ಜ್ ಲೇಔಟ್ ಗೆ ಕೆಸ್ಆರ್ಟಿಸಿ ಬಸ್ಸಿನ ವ್ಯವಸ್ಥೆ ಇದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
Story first published: Sunday, July 22, 2001, 5:30 [IST]