ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕುಲಾಷ್ಟಮಿ ಪ್ರಯುಕ್ತ ಒಡುಕತ್ತೂರು ಮಠದಲ್ಲಿ ಸಂಗೀತೋತ್ಸವ

By Staff
|
Google Oneindia Kannada News

ಬೆಂಗಳೂರು : ಶ್ರೀ ಗುರುವಾಯೂರಪ್ಪನ್‌ ಭಜನ್‌ ಸಮಾಜ ಟ್ರಸ್ಟ್‌ ಇಲ್ಲಿನ ಒಡುಕತ್ತೂರು ಮಠದಲ್ಲಿ ಜುಲೈ 21ರಿಂದ ಆಗಸ್ಟ್‌ 19ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವವನ್ನು ಆರಂಭಿಸಿದೆ.

ಟಿ.ಎನ್‌. ಶೇಷಗೋಪಾಲನ್‌ , ರಾಜಕುಮಾರ್‌ ಭಾರತಿ, ಸಂಜಯ್‌ ಸುಬ್ರಹ್ಮಣ್ಯನ್‌, ಹೈದರಾಬಾದ್‌ ಸಹೋದರರು, ಅನುರಾಧ ಶ್ರೀರಾಮ್‌ ಮತ್ತು ಶ್ರೀರಾಮ್‌ ಪರಶುರಾಮ್‌, ಪಿ. ಉನ್ನಿ ಕೃಷ್ಣನ್‌, ಮೈಸೂರು ಎಂ ಮಂಜುನಾಥ್‌ ಹಾಗೂ ಕೆ. ಎಸ್‌. ಗೋಪಾಲಕೃಷ್ಣನ್‌ ಸಂಗೀತೋತ್ಸವದಲ್ಲಿ ಕಚೇರಿ ನೀಡಲಿದ್ದಾರೆ.

ಗೋಕುಲಾಷ್ಟಮಿ ಪ್ರಯುಕ್ತ ಈ ಸಂಗೀತೋತ್ಸವವನ್ನು ಆಯೋಜಿಸಲಾಗಿದ್ದು, ಪ್ರತಿದಿನ ಸಂಗೀತೋತ್ಸವದ ಕಚೇರಿಯ ನಂತರ ರಾತ್ರಿ 9 ಗಂಟೆಗೆ ಶಿವಾಜಿ ನಗರ, ಇಂದಿರಾನಗರ, ತಿಪ್ಪಸಂದ್ರ, ದೊಮ್ಮಲೂರು ಮತ್ತು ಕೇಂಬ್ರಿಡ್ಜ್‌ ಲೇಔಟ್‌ ಗೆ ಕೆಸ್‌ಆರ್‌ಟಿಸಿ ಬಸ್ಸಿನ ವ್ಯವಸ್ಥೆ ಇದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X