Get Updates
Get notified of breaking news, exclusive insights, and must-see stories!

‘ಕೇಂದ್ರ ಸಂಸ್ಕೃತಿ ಇಲಾಖೆ ಪ್ರೀತ್ಯರ್ಥ ಮಂಗಳೂರು ವಿವಿಯಲ್ಲಿ ಜ್ಯೋತಿಷ್ಯ’

ಮಂಗಳೂರು : ವಿಶ್ವವಿದ್ಯಾಲಯ ಪಾಠಪಟ್ಟಿಯಲ್ಲಿ ಜ್ಯೋತಿಷ್ಯವನ್ನು ಅಳವಡಿಸುವ ಕುರಿತು ರಾಜ್ಯದಲ್ಲಿ ಪರವಿರೋಧ ಚರ್ಚೆಗಳನ್ನು ನಡೆಯುತ್ತಿರುವಾಗಲೇ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಜ್ಯೋತಿಷ್ಯ ಕೋರ್ಸನ್ನು ಆರಂಭಿಸುವುದಾಗಿ ಉಪಕುಲಪತಿ ಎಸ್‌. ಗೋಪಾಲ್‌ ಪ್ರಕಟಿಸಿದ್ದರು. ಕಳೆದೆರಡು ತಿಂಗಳಿನಿಂದ ಈ ಬಗ್ಗೆ ಯಾವುದೇ ವಿವಾದಗಳು ಕಾಣಿಸಿಲ್ಲವಾದರೂ, ಶನಿವಾರ ಜ್ಯೋತಿಷ್ಯ ಕೋರ್ಸು ಅಳವಡಿಕೆಯ ವಿರುದ್ಧ ಸಿಂಡಿಕೇಟ್‌ ಹಾಗೂ ಸೆನೆಟ್‌ನ ಮಾಜಿ ಸದಸ್ಯ ಎಸ್‌. ಜಿ. ಚೆಂಗಪ್ಪ ದನಿಯೆತ್ತಿದ್ದಾರೆ.

ತಮ್ಮ ಆರು ವರ್ಷಗಳ ಅವಧಿಯಲ್ಲಿ ಉಪಕುಲಪತಿಗಳು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡುತ್ತಿದ್ದಾರೆ. ಅದರಲ್ಲಿ ಜ್ಯೋತಿಷ್ಯ ಕೋರ್ಸ್‌ ಅಳವಡಿಕೆಯ ಪ್ರಯತ್ನವೂ ಒಂದಾಗಿದೆ ಎಂದು ಚೆಂಗಪ್ಪ ಆಪಾದಿಸಿದ್ದಾರೆ.

ಉಪಕುಲಪತಿ ಹುದ್ದೆಯಲ್ಲಿ ಗೋಪಾಲ್‌ ಅವರ ಎರಡನೇ ಅವಧಿ ಮುಗಿಯುತ್ತಿದ್ದಂತೆಯೇ ಅವರಿಂದಾಗಿ ಬಡ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಎಷ್ಟು ಅನನುಕೂಲವಾಗಿದೆ ಎಂಬುದು ಬೆಳಕಿಗೆ ಬರುತ್ತಿದೆ ಎಂದು ಚೆಂಗಪ್ಪ ಉದಾಹರಣೆ ಸಮೇತ ಖಂಡಿಸಿದರು.

ವಿವಿಯಲ್ಲಿ ಎಂಬಿಎ ಮತ್ತು ಎಂಸಿಎ ಪೇಮೆಂಟ್‌ ಸೀಟುಗಳು ಆರಂಭವಾಗಿದ್ದು ಇತರ ಕೋರ್ಸುಗಳೂ ಇದೇ ಪದ್ಧತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಂದ ಶಿಕ್ಷಣದ ಹಕ್ಕು ಕಸಿದುಕೊಂಡಂತಾಗಿದೆ. ಇವೆಲ್ಲದರ ಜೊತೆಗೆ ಜ್ಯೋತಿಷ್ಯ ಕೋರ್ಸು ಆರಂಭಿಸುವ ಬಗ್ಗೆ ಆಸಕ್ತಿ ತೋರಿಸುವ ಮೂಲಕ ಉಪಕುಲಪತಿಗಳು ಕೇಂದ್ರಸಂಸ್ಕೃತಿ ಇಲಾಖೆಯನ್ನು ತೃಪ್ತಿಪಡಿಸ ಹೊರಟಿದ್ದಾರೆ ಎಂದು ಚೆಂಗಪ್ಪ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+