ಸಾರನಾಥದಲ್ಲಿ ನಗಲಿರುವ ವಿಶ್ವದ ಅತಿ ಎತ್ತರದ ಬುದ್ಧ ಪ್ರತಿಮೆ
ಲಕ್ನೋ : ವಿಶ್ವದ ಅತ್ಯಂತ ಎತ್ತರದ ಬುದ್ಧ ಪ್ರತಿಮೆಯ ನೀಲನಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ಅಂತಿಮಗೊಳಿದೆ. ಈ ಪ್ರತಿಮೆ ಸಾರನಾಥದಲ್ಲಿ ತಲೆಯೆತ್ತಿ ನಿಲ್ಲಲಿದೆ.
ತಮ್ಮ ಆರು ವರ್ಷಗಳ ಅವಧಿಯಲ್ಲಿ ಉಪಕುಲಪತಿಗಳು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡುತ್ತಿದ್ದಾರೆ. ಅದರಲ್ಲಿ ಜ್ಯೋತಿಷ್ಯ ಕೋರ್ಸ್ ಅಳವಡಿಕೆಯ ಪ್ರಯತ್ನವೂ ಒಂದಾಗಿದೆ ಎಂದು ಚೆಂಗಪ್ಪ ಆಪಾದಿಸಿದ್ದಾರೆ.
ಇತ್ತೀಚೆಗಷ್ಟೇ ಆಪ್ಘಾನಿಸ್ತಾನದ ಬಮಿಯಾನ್ನಲ್ಲಿ ವಿಶ್ವದ ಅತಿ ಎತ್ತರದ ಬುದ್ಧ ಪ್ರತಿಮೆಯನ್ನು ತಾಲಿಬಾನ್ ಮಿಲಿಟರಿ ಆಡಳಿತ ನಾಶ ಮಾಡಿತ್ತು . ಇದೀಗ ಅಂತದೇ ಪ್ರತಿಮೆ ಉತ್ತರ ಪ್ರದೇಶದ ಸಾರನಾಥದಲ್ಲಿ ರೂಪುಗೊಳ್ಳಲಿದ್ದು , ಬಮಿಯಾನದಲ್ಲಿ ನಾಶಗೊಂಡ ಬುದ್ಧ ಸಾರನಾಥದಲ್ಲಿ ನಗಲಿದ್ದಾನೆ.
ಹೈದರಾಬಾದ್ನ ಹುಸೇನ್ ಸಾಗರದಲ್ಲಿರುವ ಮಹಾವೀರ ಪ್ರತಿಮೆಯ ಶಿಲ್ಪಿ ಗಣಪತಿ ಸ್ಥಪತಿ ಅವರ ಮುಂದಾಳತ್ವದಲ್ಲಿ ಸಾರನಾಥ ಬುದ್ಧ ಪ್ರತಿಮೆ ರೂಪುಗೊಳ್ಳಲಿದೆ. ಮುಸ್ಲಿಂ ಮೂಲಭೂತವಾದಿಗಳಿಂದ ಆಪ್ಘಾನಿಸ್ತಾನದಲ್ಲಿ ನಾಶಗೊಂಡ ಬುದ್ಧ ಪ್ರತಿಮೆ ಸದ್ಯದಲ್ಲಿಯೇ ಸಾರನಾಥದಲ್ಲಿ ಸಾಕಾರಗೊಳ್ಳಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಚುನಾರ್ ಶಿಲ್ಪವನ್ನು ಬುದ್ಧ ಪ್ರತಿಮೆ ಕೆತ್ತನೆಗೆ ಬಳಸಲಾಗುವುದು ಎಂದು ರಾಜ್ಯ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶೈಲೇಶ್ ಕೃಷ್ಣ ತಿಳಿಸಿದ್ದಾರೆ.
ಪ್ರಸ್ತುತ ತಿರುವನಂತಪುರದಲ್ಲಿ ನ 120 ಅಡಿಗಳ ಮೂರ್ತಿ ದೇಶದ ಅತ್ಯಂತ ಎತ್ತರದ ಮೂರ್ತಿ ಎನ್ನುವ ಅಗ್ಗಳಿಕೆಗೆ ಪಾತ್ರವಾಗಿದ್ದು , ಸಾರನಾಥದಲ್ಲಿನ ಪ್ರತಿಮೆ 180 ಅಡಿ ಎತ್ತರ ಇರುವುದು. ಲಕ್ನೋ ಕಲಾ ಕಾಲೇಜಿನ ಶಿಕ್ಷಕರು ಹಾಗೂ ಶಿಲ್ಪಿಗಳು ಕೂಡ ಬುದ್ಧ ಪ್ರತಿಮೆ ಕೆತ್ತನೆಯಲ್ಲಿ ಪಾಲ್ಗೊಳ್ಳುವರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications