ಬೆಂಗಳೂರಿಗರಿಗೆ ಮನೆ ಹತ್ತಿರದಲ್ಲೇ ಕೆಎಸ್ಆರ್ಟಿಸಿ ಬಸ್ ಹತ್ತುವ ಭಾಗ್ಯ
ಬೆಂಗಳೂರು : ಖಾಸಗಿಯವರೊಂದಿಗೆ ತುರುಸಿನ ಸ್ಪರ್ಧೆ ಎದುರಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಗರದ ವಿವಿಧ ಜಾಗೆಗಳಿಂದ ಪ್ರಯಾಣಿಕರನ್ನು ಪಿಕ್ಅಪ್ ಮಾಡುವ ಹೊಸ ಸವಲತ್ತನ್ನು ಜಾರಿಗೆ ತಂದಿದೆ. ಅಂದರೆ, ಮನೆ ಹತ್ತಿರದ ನಿಲ್ದಾಣದಿಂದಲೇ ಪ್ರಯಾಣಿಕರನ್ನು ಹೆಕ್ಕುವುದು. ಬೆಂಗಳೂರಿಂದ 28 ಪ್ರಮುಖ ಪ್ರದೇಶಗಳಿಗೆ ಸಂಚರಿಸುವ ಬಸ್ಗಳು ಈ ಸೌಕರ್ಯಕ್ಕೆ ಒಳಪಟ್ಟಿವೆ. ದಿನಗಳೆದಂತೆ ಈ ಸೌಕರ್ಯವನ್ನು ನಿಗಮ ವಿಸ್ತರಿಸಲಿದೆ.
ಸಾಮಾನ್ಯ ಗುತ್ತಿಗೆ ರೂಪದ ಮುಂಗಡ ಸೀಟು ಕಾಯ್ದಿರಿಸುವಿಕೆ ಹಾಗೂ ಮರುಪಾವತಿಗೆ ಅನುಕೂಲವಾಗುವಂತೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರುಗಳಲ್ಲಿ ಏಕ ಗವಾಕ್ಷಿ ಪದ್ಧತಿಯನ್ನೂ ಜಾರಿಗೆ ತರಲಾಗಿದೆ. ಯಾವ ಯಾವ ಡಿಪೋಗಳಲ್ಲಿ ಎಷ್ಟೆಷ್ಟು ಬಸ್ಗಳಿವೆ, ಪ್ರಯಾಣಿಕರು ಯಾವ ಡಿಪೋಗೆ ಹತ್ತಿರವಾಗಿದ್ದಾರೆ ಎಂಬೆಲ್ಲಾ ವಿಷಯಗಳ ಬಗ್ಗೆ ಪೂರಾ ಮಾಹಿತಿಯುಳ್ಳ ಅಧಿಕಾರಿಯಾಬ್ಬರು ಈ ವ್ಯವಸ್ಥೆಯ ಸಂಯೋಜಕರಾಗಿರುತ್ತಾರೆ.
ಕೆಎಸ್ಆರ್ಟಿಸಿ ಬಸ್ ಬಾಡಿಗೆ ದರ ಇಂತಿದೆ
ಸಾಮಾನ್ಯ ಬಸ್- ಪ್ರತಿ ಕಿ.ಮೀ.ಗೆ 15 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 3,750 ರುಪಾಯಿ
ಸೆಮಿ ಡಿಲಕ್ಸ್- ಪ್ರತಿ ಕಿ.ಮೀ.ಗೆ 16 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 4000 ರುಪಾಯಿ
ಡಿಲಕ್ಸ್ - ಪ್ರತಿ ಕಿ.ಮೀ.ಗೆ 18 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 4500 ರುಪಾಯಿ
ಸೂಪರ್ ಡಿಲಕ್ಸ್- ಪ್ರತಿ ಕಿ.ಮೀ.ಗೆ 20 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 5000 ರುಪಾಯಿ
ಹೊಸ ಸೌಕರ್ಯ ಇರುವ ಜಾಗೆಗಳು : ಜಯನಗರ 4ನೇ ಬ್ಲಾಕ್, ವಿಜಯನಗರ, ಶಿವಾಜಿನಗರ, ಕೋರಮಂಗಲ, ವಿಲ್ಸನ್ ಗಾರ್ಡನ್, ಜೆ.ಪಿ.ನಗರ, ಚಾಮರಾಜಪೇಟೆ, ಕಲಾಸಿಪಾಳ್ಯ, ಆರ್.ಟಿ.ನಗರ, ಕತ್ರಿಗುಪ್ಪೆ, ಜೀವನ ಭೀಮಾ ನಗರ ಮೊದಲಾದವು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications