ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೊಡೆವ ಮುನ್ನವೇ ಕರಕಲಾಗುತ್ತಿರುವ ಬೀಜ

By Staff
|
Google Oneindia Kannada News

ಮುಖಪುಟ

ಜುಲೈ 20, 2001

Gorur Dam

ಕಣ್ಣೊಡೆವ ಮುನ್ನವೇ ಕರಕಲಾಗುತ್ತಿರುವ ಬೀಜ

ಹೊಟ್ಟೆಗೆ ಹಿಟ್ಟನ್ನು ಸಂಪಾದಿಸಿಕೊಳ್ಳಲು ಕಷ್ಟವಾಗುತ್ತಿರುವ ಹೊತ್ತಿನಲ್ಲಿ ಜಾನುವಾರುಗಳಿಗೆ ಮೇವನ್ನು ಎಲ್ಲಿಂದ ತರುವುದು ? ಬರಗಾಲದಿಂದ ತತ್ತರಿಸಿರುವ ಹುಬ್ಬಳ್ಳಿ, ಕೊಪ್ಪಳ, ಗದಗ, ಗಂಗಾವತಿ ಸುತ್ತುಮುತ್ತಲಿನ ಜನತೆ ಜಾನುವಾರುಗಳನ್ನು ಬಿಕರಿ ಮಾಡಲು ಪ್ರಾರಂಭಿಸಿದ್ದಾರೆ. ಆ ಜಾನುವಾರುಗಳು ಗೋವಾದ ಕಸಾಯಿಖಾನೆ ಸೇರುತ್ತಿವೆ. ಮುದ್ದಿನಿಂದ ಸಾಕಿದ ದನ ಕರುಗಳನ್ನು ಕೈಯ್ಯಾರೆ ಕಸಾಯಿಖಾನೆಗೆ ಕೊಡಲಾಗದವರು ಜಾನುವಾರುಗಳ ಕುತ್ತಿಗೆಯಿಂದ ಹಗ್ಗ ಬಿಚ್ಚಿ ಅವುಗಳ ಪಾಡಿಗೆ ಬಿಟ್ಟು ಬಿಡುತ್ತಿದ್ದಾರೆ. ಇತ್ತ ಬರ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಕೇಂದ್ರದ ನೆರವಿನತ್ತ ಮುಖ ಮಾಡಿದೆ.

ಕರಾವಳಿಯ ಹೊರತಾಗಿ ರಾಜ್ಯದ ಬಹುತೇಕ ಜಿಲ್ಲೆಗಳು ಕುಡಿಯುವ ನೀರಿಗೂ ಸಂಚಕಾರ ಎನ್ನುವ ಸಂಕಷ್ಟ ಎದುರಿಸುತ್ತಿವೆ. ಅತ್ತ ಒರಿಸ್ಸಾ , ಕೇರಳಗಳಲ್ಲಿ ನದಿಗಳು ಹುಚ್ಚು ರಭಸದಿಂದ ಹರಿಯುತ್ತಿದ್ದರೆ, ಕರ್ನಾಟಕದ ಬಯಲುಸೀಮೆಯಲ್ಲಿ ಇಂಚು ಮಣ್ಣೂ ತೇವವಾಗದ ದುರಂತ.

ಈ ನಡುವೆ ಕಳೆದೊಂದು ವಾರದಲ್ಲಿ ಬಿದ್ದ ತುಂತುರಿಗೆ, ಹೊಂಚಿಕೊಂಡಿದ್ದ ಬೀಜವನ್ನು ಕೋಲಾರ, ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ರೈತರು ಬಿತ್ತಿದ್ದಾರೆ. ಬೀಜ ಕಣ್ಣೊಡೆಯುವುದನ್ನೇ ದಿನವೂ ಕಾಯುತ್ತಿದ್ದಾರೆ. ಆದರೆ, ಮಳೆ ಮತ್ತೆ ಮುಖಮಾಡಿಲ್ಲ . ಕ್ಷಣದಿಂದ ಕ್ಷಣಕ್ಕೆ ಬೀಜ ಕರಕಲಾಗುತ್ತಿದೆ.

ಶುಕ್ರವಾರದ ಹವಾಹವಾ
ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದೆ. ಉಳಿದಂತೆ ಕರಾವಳಿಯ ಹಲವೆಡೆ ಸಾಧಾರಣ ಮಳೆಬಿದ್ದಿದೆ.

ಮಳೆ ಪ್ರವರ :
ಆಗುಂಬೆ - 9 ಸೆಂಮೀ
ಭಾಗಮಂಡಲ, ಕಮ್ಮರಡಿ, ತಾಳಗುಪ್ಪ, ಕೊಲ್ಲೂರು- ತಲಾ 3 ಸೆಂಮೀ
ಧರ್ಮಸ್ಥಳ, ಬೆಳ್ತಂಗಡಿ, ಮಾಣಿ, ಸಿದ್ಧಾಪುರ, ಕುಂದಾಪುರ, ಮೂಡಬಿದರೆ, ಕಾರವಾರ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಶೃಂಗೇರಿ, ಹೊಸನಗರ ಹಾಗೂ ಮೂರ್ನಾಡು - ತಲಾ 2 ಸೆಂಮೀ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ -

ಜಲಾಶಯ

ಗರಿಷ್ಠ ಮಟ್ಟ

ಇಂದಿನಮಟ್ಟ

ಲಿಂಗನಮಕ್ಕಿ

1819.00

1777. 25

ಕಬಿನಿ

2284.00

2277.30

ಕೆಆರ್‌ಎಸ್‌

124.80

104.78

ಹೇಮಾವತಿ

2922.00

2910.79

ತುಂಗಭದ್ರಾ

1633.00

1617.11

ಹಾರಂಗಿ

2859.00

2858.75

ಸುಪಾ

1859.39

1736.05

ವಾರಾಹಿ

1950.00

1909.34

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X