ಕಣ್ಣೊಡೆವ ಮುನ್ನವೇ ಕರಕಲಾಗುತ್ತಿರುವ ಬೀಜ
ಮುಖಪುಟ
ಕಣ್ಣೊಡೆವ ಮುನ್ನವೇ ಕರಕಲಾಗುತ್ತಿರುವ ಬೀಜ
ಕರಾವಳಿಯ ಹೊರತಾಗಿ ರಾಜ್ಯದ ಬಹುತೇಕ ಜಿಲ್ಲೆಗಳು ಕುಡಿಯುವ ನೀರಿಗೂ ಸಂಚಕಾರ ಎನ್ನುವ ಸಂಕಷ್ಟ ಎದುರಿಸುತ್ತಿವೆ. ಅತ್ತ ಒರಿಸ್ಸಾ , ಕೇರಳಗಳಲ್ಲಿ ನದಿಗಳು ಹುಚ್ಚು ರಭಸದಿಂದ ಹರಿಯುತ್ತಿದ್ದರೆ, ಕರ್ನಾಟಕದ ಬಯಲುಸೀಮೆಯಲ್ಲಿ ಇಂಚು ಮಣ್ಣೂ ತೇವವಾಗದ ದುರಂತ.
ಈ ನಡುವೆ ಕಳೆದೊಂದು ವಾರದಲ್ಲಿ ಬಿದ್ದ ತುಂತುರಿಗೆ, ಹೊಂಚಿಕೊಂಡಿದ್ದ ಬೀಜವನ್ನು ಕೋಲಾರ, ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ರೈತರು ಬಿತ್ತಿದ್ದಾರೆ. ಬೀಜ ಕಣ್ಣೊಡೆಯುವುದನ್ನೇ ದಿನವೂ ಕಾಯುತ್ತಿದ್ದಾರೆ. ಆದರೆ, ಮಳೆ ಮತ್ತೆ ಮುಖಮಾಡಿಲ್ಲ . ಕ್ಷಣದಿಂದ ಕ್ಷಣಕ್ಕೆ ಬೀಜ ಕರಕಲಾಗುತ್ತಿದೆ.
ಶುಕ್ರವಾರದ
ಹವಾಹವಾ
ಕರಾವಳಿ
ಹಾಗೂ
ಉತ್ತರ
ಒಳನಾಡಿನಲ್ಲಿ
ಮುಂಗಾರು
ದುರ್ಬಲಗೊಂಡಿದೆ.
ಉಳಿದಂತೆ
ಕರಾವಳಿಯ
ಹಲವೆಡೆ
ಸಾಧಾರಣ
ಮಳೆಬಿದ್ದಿದೆ.
ಮಳೆ
ಪ್ರವರ
:
ಆಗುಂಬೆ
-
9
ಸೆಂಮೀ
ಭಾಗಮಂಡಲ,
ಕಮ್ಮರಡಿ,
ತಾಳಗುಪ್ಪ,
ಕೊಲ್ಲೂರು-
ತಲಾ
3
ಸೆಂಮೀ
ಧರ್ಮಸ್ಥಳ,
ಬೆಳ್ತಂಗಡಿ,
ಮಾಣಿ,
ಸಿದ್ಧಾಪುರ,
ಕುಂದಾಪುರ,
ಮೂಡಬಿದರೆ,
ಕಾರವಾರ,
ಮಂಗಳೂರು
ವಿಮಾನ
ನಿಲ್ದಾಣ,
ಪಣಂಬೂರು,
ಶೃಂಗೇರಿ,
ಹೊಸನಗರ
ಹಾಗೂ
ಮೂರ್ನಾಡು
-
ತಲಾ
2
ಸೆಂಮೀ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ -
ಜಲಾಶಯ | ಗರಿಷ್ಠ ಮಟ್ಟ | ಇಂದಿನಮಟ್ಟ |
ಲಿಂಗನಮಕ್ಕಿ | 1819.00 | 1777. 25 |
ಕಬಿನಿ | 2284.00 | 2277.30 |
ಕೆಆರ್ಎಸ್ | 124.80 | 104.78 |
ಹೇಮಾವತಿ | 2922.00 | 2910.79 |
ತುಂಗಭದ್ರಾ | 1633.00 | 1617.11 |
ಹಾರಂಗಿ | 2859.00 | 2858.75 |
ಸುಪಾ | 1859.39 | 1736.05 |
ವಾರಾಹಿ | 1950.00 | 1909.34 |