ಡಾ. ರಾಜ್ ಅಪಹರಣಕ್ಕೆ 1 ವರ್ಷ, ಬಿಡುಗಡೆಯಾಗಿ ನವಮಾಸ
*ಚಿತ್ರಗುಪ್ತ
ಬೆಂಗಳೂರು : ಇಂದು ಜುಲೈ 20 ಶುಕ್ರವಾರ, ಆಷಾಢ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆ. ಅದೂ ಭೀಮನ ಅಮಾವಾಸ್ಯೆ. ಭೀಮನ ಅಮಾವಾಸ್ಯೆ ಬಂದರೆ, ಕರ್ನಾಟಕದಲ್ಲಿ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣವೂ ಇದೆ.
ತವರಿಗೆ ಹೋದ ಹೆಂಡತಿ ನಾಳೆಯೇ ಬರುವಳೆಂಬ ನವವಿವಾಹಿತರ ತವಕ, ವಿರಹಗೀತೆಗೆ ಅಂತ್ಯ. ನಾನ್ವೆಜ್ ನಾಲಗೆಯ ಜಾತಿಗೆ ಸೇರಿದವರಾದರೆ ಹೊಟ್ಟೆತುಂಬ ಮಾಂಸದ ಊಟ , ಮದ್ಯ ಕುಡಿಯಬಹುದೆಂಬ ಆನಂದ. ಸಂಪ್ರದಾಯಸ್ಥ ಹಿಂದೂಗಳಾದರೆ ಆದರೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶ್ರಾವಣದ ತೋರಣ ಕಟ್ಟಿ ಸಂಭ್ರಮಿಸುವ ಋತು ಸಮೀಪಿಸಿದ ಸಂಭ್ರಮ. ಆದರೆ ಕಳೆದ ವರ್ಷದ ಭೀಮನ ಅಮಾವಾಸ್ಯೆ ಸ್ಮರಿಸಿದರೆ, ಕನ್ನಡಿಗರ ಮೈ ಜುಂ ಎನ್ನುತ್ತದೆ. ಕೆಲವರಿಗೆ ರೋಷ ಉಕ್ಕಿ ಹರಿದೀತು. ನಮ್ಮ ರಕ್ಷಣಾ ವ್ಯವಸ್ಥೆಯ ಬಗ್ಗೆ ಹಲವರಿಗೆ ಛೆಛೆ ಎನಿಸೀತು. !
ರಾಜ್ ಅಪಹರಣವಾಗಿ ಒಂದು ವರ್ಷವಾದರೂ, ಬಿಡುಗಡೆಯಾಗಿ 9 ತಿಂಗಳೇ ತುಂಬುತ್ತಾ ಬಂದಿದ್ದರೂ, ರಾಜ್ ಅಪರಣ ವಾದದ್ದು ಏಕೆ? ರಾಜ್ ಅಪಹರಣದ ಹಿಂದಿನ ಉದ್ದೇಶವೇನಿತ್ತು?, ರಾಜ್ ಬಿಡುಗಡೆ ಬೇಷರತ್ತಾಗಿ ಹೇಗಾಯ್ತು? ನಿಜವಾಗಿಯೂ ರಾಜ್ರನ್ನು ಬಿಡುಗಡೆ ಮಾಡಿಸಿದವರು ಯಾರು? ಎಂಬಿತ್ಯಾದಿ ಎಲ್ಲ ಪ್ರಶ್ನೆಗಳೂ ಪ್ರಶ್ನೆಗಳಾಗಿಯೇ ಉಳಿದಿವೆ.
ಕಂಬಾಲಪಲ್ಲಿ ನರಮೇಧ, ಗಡಿ ಪ್ರದೇಶದಲ್ಲಿ ಎಸ್ಟಿಎಫ್ ದೌರ್ಜನ್ಯ, ಟಾಡಾ ಬಂದಿಗಳ ಬಿಡುಗಡೆ, ತಿರುವಳ್ಳುವರ್ ಪ್ರತಿಮೆ, ತಮಿಳು ಕರ್ನಾಟಕದಲ್ಲಿ ದ್ವಿತೀಯ ಭಾಷೆಯಾಗಬೇಕು ಎಂಬಿತ್ಯಾದಿ ಬೇಡಿಕೆಗಳು ಹೇಗೆ ಬಂದವು? ಏಕೆ ಬಂದವು? ವೀರಪ್ಪನ್ ಹಿಂದೆ ಇದ್ದ ಕಾಣದ ಕೈ ಯಾವುದು ಎಂಬುದು ಇನ್ನೂ ನಿಗೂಢವಾಗೇ ಇದೆ.
ಕಹಿನೆನಪು : ಕಳೆದ ವರ್ಷ ಡಾ. ರಾಜ್ಕುಮಾರ್, ತಮ್ಮ ಹುಟ್ಟೂರಾದ ಗಾಜನೂರಿನ ತೋಟದ ಮನೆಯಲ್ಲಿ ಭೀಮನ ಅಮಾವಾಸ್ಯೆಯಂದು ತಲೆ ಮಾಂಸದ ಊಟ ಮಾಡಿ, ಟೀವಿಯಲ್ಲಿ ಚಲನಚಿತ್ರ ನೋಡುತ್ತಿದ್ದಾಗ, ಬರ ಸಿಡಿಲಿನಂತೆ ಎರಗಿದ ವೀರಪ್ಪನ್ ಹಾಗೂ ತಂಡದವರು, ರಾಜ್, ರಾಜ್ ಅವರ ಅಳಿಯ ಗೋವಿಂದರಾಜ್, ನಾಗೇಶ್ ಹಾಗೂ ನಾಗಪ್ಪ ಅವರುಗಳನ್ನು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲು ಅಪಹರಿಸಿದ್ದ.
ರಾಜ್ ಬಿಡುಗಡೆ ಇಂದು, ನಾಳೆ ಎಂದು 108 ದಿನವೇ ಕಳೆಯಿತು. ಈ ಮಧ್ಯೆ ನಾಗಪ್ಪ ಮಾರಡಗಿ ಕಾಡಿನಿಂದ ಊರಿಗೆ ಓಡಿಬಂದರೆ, ಮತ್ತೊಮ್ಮೆ ರಾಜ್ ಬಿಡುಗಡೆಯಾಗುತ್ತಾರೆ ಎಂಬ ಬಲವಾದ ನಂಬಿಕೆಯ ಊಹಾ ಪೋಹಗಳ ನಡುವೆ ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications