ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿ.ಆರ್. ಪ್ರಾಜೆಕ್ಟ್, ಗಾಜನೂರಿನಲ್ಲಿ ಸಂಗೀತ-ನೃತ್ಯ ಕಾರಂಜಿ
ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಗಾಜನೂರು ಹಾಗೂ ಬಿ.ಆರ್. ಪ್ರಾಜೆಕ್ಟ್ನಲ್ಲಿ ಸಂಗೀತ ಮತ್ತು ನೃತ್ಯ ಕಾರಂಜಿಯನ್ನು ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ವಿಷಯವನ್ನು ಪ್ರವಾಸೋದ್ಯಮ ಖಾತೆ ಸಚಿವ ಆರ್. ರೋಷನ್ಬೇಗ್ ವಿಧಾನಸಭೆಗೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಬಳಿಯ ಬೃಂದಾವನ ಗಾರ್ಡನ್ನಲ್ಲಿರುವ ಮಾದರಿಯಲ್ಲೇ ಗಾಜನೂರು ಮತ್ತು ಬಿ.ಆರ್. ಪ್ರಾಜೆಕ್ಟ್ನಲ್ಲಿ ಕಾರಂಜಿ ನಿರ್ಮಿಸಲಾಗುವುದು ಎಂದು ಶೂನ್ಯ ವೇಳೆಯಲ್ಲಿ ಎಚ್.ಎಂ. ಚಂದ್ರಶೇಖರಪ್ಪ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವರು ತಿಳಿಸಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಗಾಜನೂರು ಹಾಗೂ ಬಿ.ಆರ್. ಪ್ರಾಜೆಕ್ಟ್ಗಳನ್ನು ಪ್ರವಾಸಿ ಕೇಂದ್ರ ಎಂದು ಗುರುತಿಸಿದೆ. ಈಗ ಅದನ್ನು ಅಭಿವೃದ್ಧಿಗೊಳಿಸಿ, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, July 20, 2001, 5:30 [IST]