ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ರಾಜ್ಯ ಸರ್ಕಾರದಿಂದ 25 ಲಕ್ಷ ರುಪಾಯಿ
ಬೆಂಗಳೂರು : ಸಂಸತ್ ಸದಸ್ಯರ ನಿಧಿಗೆ ಕೇಂದ್ರ ಸರಕಾರ ಕೊಡ ಮಾಡುವ ಮಾದರಿಯಲ್ಲೇ ರಾಜ್ಯದ ಶಾಸಕರಿಗೂ ಕ್ಷೇತ್ರಾಭಿವೃದ್ಧಿಗಾಗಿ 25 ಲಕ್ಷ ರುಪಾಯಿಗಳನ್ನು ನೀಡುವ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ವಿಷಯವನ್ನು ಬುಧವಾರ ವಿಧಾನಸಭೆಯಲ್ಲಿ ಪ್ರಕಟಿಸಲಾಯಿತು.
ಆದೇಶದ ವಿವರಗಳನ್ನು ಅಧಿಕೃತವಾಗಿ ವಿಧಾನಸಭೆಯಲ್ಲಿ ಪ್ರಕಟಿಸಿದ ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯ ಸರಕಾರ ಕ್ಷೇತ್ರಾಭಿವೃದ್ಧಿಗಾಗಿ ಶಾಸಕರಿಗೆ ನೀಡುವ 25 ಲಕ್ಷ ರುಪಾಯಿಗಳನ್ನು ಎರಡು ಸಮಾನ ಕಂತುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರಾಭಿವೃದ್ಧಿಗಾಗಿಯೇ ಬಿಡುಗಡೆ ಮಾಡುವ ಹಣವನ್ನು ಹೇಗೆ ಬಳಸಬೇಕು. ಯಾವ ಕಾರ್ಯಗಳಿಗೆ ಬಳಸಬೇಕು ಎಂಬ ಬಗ್ಗೆ ರೂಪು-ರೇಷೆಗಳನ್ನು ರೂಪಿಸಲಾಗಿದೆ ಎಂದೂ ಖರ್ಗೆ ಈ ಸಂದರ್ಭದಲ್ಲಿ ತಿಳಿಸಿದರು.
Story first published: Thursday, July 19, 2001, 5:30 [IST]