ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೃಂಗಸಭೆಯ ಫಲಶ್ರುತಿ ಚರ್ಚೆಗೆ ಗುರುವಾರ ಸಂಜೆ ಸರ್ವಪಕ್ಷ ಸಭೆ
ನವದೆಹಲಿ : ಭಾರಿ ನಿರೀಕ್ಷೆ ಮೂಡಿಸಿ, ಭ್ರಮನಿರಸನಗೊಳಿಸಿದ ಭಾರತ - ಪಾಕ್ ಶೃಂಗಸಭೆಯ ಬಗ್ಗೆ ಹಾಗೂ ಆನಂತರದ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಸಂಜೆ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ.
ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಸಭೆಯಲ್ಲಿ ಪ್ರಧಾನಿ ವಾಜಪೇಯಿ ಅವರು, ಶೃಂಗಸಭೆಯ ಬಗ್ಗೆ ಪ್ರತಿಪಕ್ಷಗಳ ಅಭಿಪ್ರಾಯವನ್ನು ಪಡೆಯಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಮೋದ್ ಮಹಾಜನ್ ತಿಳಿಸಿದ್ದಾರೆ.
ಭಾರತ- ಪಾಕ್ ಮಾತುಕತೆಗಳು ಮುರಿದುಬಿದ್ದ ಹಿನ್ನೆಲೆಯಲ್ಲಿ ಗಡಿಯಾಚೆಯ ಭಯೋತ್ಪಾದನೆ ಹೆಚ್ಚುವ ಸಾಧ್ಯತೆ ಇದ್ದು, ಭಯೋತ್ಪಾದಕರಿಂದ ಉಂಟಾಗಬಹುದಾದ ಅನಾಹುತಗಳನ್ನು ಹತ್ತಿಕ್ಕಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಮುಖಪುಟ / ಆಗ್ರಾ ಶೃಂಗಸಭೆ
Story first published: Thursday, July 19, 2001, 5:30 [IST]