ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜುಲೈ 20 ರ ಶುಕ್ರವಾರ ಬೆಂಗಳೂರಿಗೆ ದಲೈ ಲಾಮಾ
ಬೆಂಗಳೂರು : ಟಿಬೆಟ್ನ ಧಾರ್ಮಿಕ ನಾಯಕ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ದಲೈ ಲಾಮಾ ಜುಲೈ 20 ರ ಶುಕ್ರವಾರ ರಾಜಧಾನಿಗೆ ಆಗಮಿಸಲಿದ್ದಾರೆ.
ಮರುದಿನ ಶನಿವಾರ ಮೈಸೂರು ಜಿಲ್ಲೆಯ ಬೈಲಕುಪ್ಪೆಗೆ ತೆರಳುವ ಲಾಮಾ ಅವರು, ಅಲ್ಲಿನ ಟಿಬೆಟಿಯನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುವರು. ದಕ್ಷಿಣ ಭಾರತದ ಟಿಬೆಟಿಯನ್ ಅಡ್ಮಿನಿಸ್ಟ್ರೇಶನ್ನ ವಿಶೇಷ ಅಧಿಕಾರಿ ಚೊಯೆಬೆಲ್ ಪುಪ್ಟೆನ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಭೇಟಿಯ ಕಾಲದಲ್ಲಿ ಲಾಮಾ ಅವರಿಗೆ ಝೆಡ್ ದರ್ಜೆಯ ರಕ್ಷಣೆಯನ್ನು ಪೊಲೀಸ್ ಇಲಾಖೆ ನೀಡಲಿದೆ.
10 ದಿನಗಳ ಕಾಲ ಪ್ರತಿದಿನ ಕನಿಷ್ಠ 20 ಸಾವಿರ ಮಂದಿಯನ್ನು ಉದ್ದೇಶಿಸಿ ಮಾತನಾಡುವ ಲಾಮಾ ಅವರ ಕಾರ್ಯಕ್ರಮ ಸಂಪೂರ್ಣ ಧಾರ್ಮಿಕವಾದುದು ಎಂದು ಲಾಮಾ ಅವರ ಪ್ರವಾಸವನ್ನು ಪುಪ್ಟೆನ್ ಬಣ್ಣಿಸಿದರು. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಟಿಬೆಟಿಯನ್ನರು ಕರ್ನಾಟಕದಲ್ಲಿ ವಾಸವಾಗಿದ್ದು , ರಾಜ್ಯದ ಮಟ್ಟಿಗೆ ಹೆಚ್ಚಿನ ಸಂಖ್ಯೆಯ ಟಿಬೆಟಿಯನ್ ಮಂದಿ ಬೈಲಕುಪ್ಪೆಯಲ್ಲಿ ವಾಸವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
Story first published: Tuesday, July 17, 2001, 5:30 [IST]