ವಾಜಪೇಯಿ ವಿಚಾರಗಳಲ್ಲಿ ನನಗೆ ಗೌರವವಿದೆ- ಮುಷರ್ರಫ್
ಆಗ್ರಾ : ಪಾಕಿಸ್ತಾನ- ಭಾರತದ ಬಹು ಮುಖ್ಯವಾದ ಸಮಸ್ಯೆ ಕಾಶ್ಮೀರ. ಅದಕ್ಕೇ ನನ್ನ ಒತ್ತು. ಹಾಗಂತ ಶೃಂಗಸಭೆಯಲ್ಲಿ ಬೇರೆ ವಿಷಯಗಳನ್ನು ಚರ್ಚಿಸುವುದಿಲ್ಲ ಎಂದು ನಾನು ಖಂಡಿತ ಹೇಳಿಲ್ಲ ಎಂದು ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಸ್ಪಷ್ಟಪಡಿಸಿದ್ದಾರೆ.
ಸ್ಟಾರ್ ನ್ಯೂಸ್ ಚಾನೆಲ್ನಲ್ಲಿ ಸೋಮವಾರ ಅವರು ಮಾತಾಡುತ್ತಿದ್ದರು. ನಾನು ಎರಡು ಯುದ್ಧಗಳಲ್ಲಿ ಭಾಗವಹಿಸಿರುವವನು. ಭಾರತ- ಪಾಕಿಸ್ತಾನ ಕಾದಾಡಿ, ಪರಸ್ಪರ ಕೊಂದಾಡಿರುವುದು ಕಾಶ್ಮೀರ ಸಮಸ್ಯೆಗೇ. ಈ ಸಮಸ್ಯೆ ಬಗೆಹರಿಸುವುದು ಎಷ್ಟು ಮುಖ್ಯ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು. ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಭಾರತದ ಪ್ರಧಾನಿ ವಾಜಪೇಯಿ ಅವರ ನಿಲುವು, ವಿಚಾರಗಳು ಸ್ವಾಗತಾರ್ಹವಾದವು. ಅವುಗಳಿಗೆ ನನ್ನ ಗೌರವವಿದೆ ಎಂದು ಮುಷರ್ರಫ್ ಹೇಳಿದರು.
ನಾವು ಒಂದಾದ ನಂತರ ಒಂದರಂತೆ ಮೆಟ್ಟಿಲೇರಬೇಕು. ಮಾತುಕತೆ ಪ್ರಾರಂಭವಾಗಿರುವುದು ಮೊದಲ ಮೆಟ್ಟಿಲು. ಕಾಶ್ಮೀರ ಸಮಸ್ಯೆ ಚರ್ಚೆಯ ಮುಖ್ಯವಸ್ತು ಎಂಬುದನ್ನು ಅರಿಯುವುದು 2ನೇ ಮೆಟ್ಟಿಲು. ಹೀಗೇ ಹಂತಹಂತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಆಗ ಉಭಯ ರಾಷ್ಟ್ರಗಳ ಸಭೆಯ ಉದ್ದಿಶ್ಯ ಈಡೇರಲಿದೆ ಎಂದು ತಿಳಿಸಿದರು.
ಎತ್ತಿನ ಕೊಂಬು ಹಿಡಿದು ನಿಲ್ಲಿಸಿ, ಅದರ ಮೇಲೆ ಗಾಡಿಯ ನೊಗ ಹೊರಿಸಿದಲ್ಲಿ ಮಾತ್ರ ಪಯಣ ಮುಂದುವರಿಸಲು ಸಾಧ್ಯ. ಚಿಕ್ಕ ರಾಷ್ಟ್ರದ ಹಿತಾಸಕ್ತಿಯನ್ನು ಅದಕ್ಕಿಂತ ದೊಡ್ಡ ರಾಷ್ಟ್ರ ತಿರಸ್ಕರಿಸುವಂತಿಲ್ಲ. ಸಮಾಲೋಚಿಸಿ, ತಾಳ್ಮೆಯಿಂದ ಪರಸ್ಪರ ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬೇಕು ಎಂದು ಹೇಳಿದ ಮುಷರ್ರಫ್, ಸೋಮವಾರದ ಚರ್ಚೆಯಲ್ಲಿ ನಮ್ಮ ಉದ್ದಿಶ್ಯ ಈಡೇರಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications