ಗಂಗಾಜಲ ಸುರಿದು ಶಿವಸೈನಿಕರಿಂದ ಗಾಂಧಿ ಸಮಾಧಿ ಶುದ್ಧೀಕರಣ
ನವದೆಹಲಿ : ರಾಜಘಾಟ್ನಲ್ಲಿನ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಶನಿವಾರ ಗೌರವ ಸಲ್ಲಿಸಿ ತೆರಳಿದ ನಂತರ ಶಿವಸೇನೆಯ ಕಾರ್ಯಕರ್ತರು ಗಂಗಾಜಲದಿಂದ ಸಮಾಧಿಯನ್ನು ಶುದ್ಧಗೊಳಿಸಿರುವ ವರದಿ ತಡವಾಗಿ ಹೊರಬಿದ್ದಿದೆ.
ಅನೇಕ ಭಾರತೀಯ ಯೋಧರು ಹುತಾತ್ಮರಾದ ಕಾರ್ಗಿಲ್ ಕದನಕ್ಕೆ ಮುಷರ್ರಫ್ ಅವರೇ ಕಾರಣ. ಅವರು ಸಲ್ಲಿಸಿದ ಪುಷ್ಪಗುಚ್ಛಗಳಿಂದ ಗಾಂಧೀಜಿ ಸಮಾಧಿ ಅಪವಿತ್ರಗೊಂಡಿತ್ತು ಎಂದು ಶಿವಸೈನಿಕರ ಕೃತ್ಯವನ್ನು ಪಕ್ಷದ ದೆಹಲಿ ಘಟಕದ ಉಪಾಧ್ಯಕ್ಷ ಓಂದತ್ತ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.
ಗಂಗಾಜಲವನ್ನು ಸುರಿಯುವ ಮೂಲಕ ಸಮಾಧಿಯನ್ನು ಶುದ್ದಿಗೊಳಿಸಲಾಯಿತು. ಈ ಶುದ್ಧೀಕರಣ ಘಟನೆಯ ಹಿನ್ನೆಲೆಯಲ್ಲಿ ಶಿವಸೈನಿಕರಾದ ರೇಣು ಬಾಲಾ, ಜೈ ಪ್ರಕಾಶ್ ಭಾಗೇಲ್, ರಾಜನ್ ಶರ್ಮಾ ಹಾಗೂ ಓಂ ಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಮುಷರ್ರಫ್ ಅವರ ಭೇಟಿಯಿಂದ ಅಪವಿತ್ರಗೊಂಡ ಸಮಾಧಿ ಶುದ್ಧೀಕರಣಕ್ಕಾಗಿ ರಾಜ್ಘಾಟ್ನತ್ತ ಧಾವಿಸಿದ ಸುಮಾರು ಶಿವಸೈನಿಕರ ತಂಡವನ್ನು ಭದ್ರತಾ ಸಿಬ್ಬಂದಿ ತಡೆಗಟ್ಟಿದರೂ, ಕೆಲವರು ರಕ್ಷಣಾ ಪಡೆಯನ್ನು ನುಸುಳಿಕೊಂಡು ಸಮಾಧಿಯ ಮೇಲೆ ಗಂಗಾಜಲ ಸುರಿಯುವಲ್ಲಿ ಯಶಸ್ವಿಯಾದರು ಎಂದು ಶರ್ಮ ತಿಳಿಸಿದ್ದಾರೆ.
1999 ರಲ್ಲಿ ಪ್ರಧಾನಿ ವಾಜಪೇಯಿ ಅವರ ಲಾಹೋರ್ ಸಂದರ್ಭದಲ್ಲಿ , ಮಿನಾರ್-ಎ- ಪಾಕಿಸ್ತಾನ್ ಪ್ರದೇಶವನ್ನು ವಾಜಪೇಯಿ ಭೇಟಿ ನೀಡಿದರೆಂದು ಜಮಾತೆ ಇಸ್ಲಾಂ ಕಾರ್ಯಕರ್ತರು ಶುದ್ಧೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಇನ್ಫೋ ವಾರ್ತೆ)
what do you think about this ?
ಮುಖಪುಟ / ಆಗ್ರಾ ಶೃಂಗಸಭೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications