Get Updates
Get notified of breaking news, exclusive insights, and must-see stories!

ಸರಿಯಾಗಿ 50 ವರ್ಷಗಳ ಹಿಂದೆ ಕೆಂಗಲ್‌ರಕನಸು ಚಿಗುರಿತ್ತು !

ಬೆಂಗಳೂರು : ಜುಲೈ 13, 1951. ಆಗಿನ್ನೂ ಕರ್ನಾಟಕ ಉದಯವಾಗಿರಲಿಲ್ಲ . ಇದ್ದುದು ಮೈಸೂರು ರಾಜ್ಯ. ಕೆಂಗಲ್‌ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದರು. ಪ್ರಧಾನಿ ನೆಹರು ಬೇಡ ಬೇಡವೆಂದರೂ, ಸಂಕಷ್ಟ ಕಾಲದಲ್ಲಿ ಕೋಟ್ಯಂತರ ರುಪಾಯಿಗಳ ದುಬಾರಿ ಕಾಮಗಾರಿ ಸಲ್ಲದೆಂದರೂ ಹನುಮಂತಯ್ಯನವರದು ಬಿಗಿಪಟ್ಟು . ಮಹತ್ವಾಕಾಂಕ್ಷೆಯ ಕಟ್ಟಡ ವಿಧಾನಸೌಧಕ್ಕೆ 1951 ರ ಜುಲೈ 13 ರಂದು ಶಂಕುಸ್ಥಾಪನೆ ನೆರವೇರಿಸಿಯೇ ಬಿಟ್ಟರು.

ಆ ಐತಿಹಾಸಿಕ ಘಟನೆಗೀಗ 50 ವರ್ಷ
ಕೆಂಗಲ್‌ ಹನುಮಂತಯ್ಯ ಈಗಿಲ್ಲ . ಅಷ್ಟೇಕೆ 1956 ರಲ್ಲಿ ವಿಧಾನಸೌಧ ಪೂರ್ಣವಾಗುವ ಹೊತ್ತಿಗೆ ಹನುಮಂತಯ್ಯ ಕುರ್ಚಿಯಿಂದ ಕೆಳಗಿಳಿದಿದ್ದರು. ಆದರೆ, ವಿಧಾನಸೌಧವನ್ನು ನೋಡಿದಾಗಲೆಲ್ಲ ಹನುಮಂತಯ್ಯ ನೆನಪಾಗುತ್ತಾರೆ. ಈ ಹೊತ್ತು ವಿಧಾನಸೌಧದ ಮೂಲಕವೇ ಅವರನ್ನು ಜನ ನೆನಪಿಸಿಕೊಳ್ಳುವಂತಾಗಿದೆ. ವಿಧಾನಸೌಧ ರಾಜ್ಯದ ವಾಸ್ತುಶಿಲ್ಪ ವೈಭವಕ್ಕೆ ಮುಕುಟಪ್ರಾಯ ಎನ್ನುವುದು ತಜ್ಞರ ಅಭಿಪ್ರಾಯ.

ಈಗ ವಿಧಾನಸೌಧದಲ್ಲಿ ಕೃಷ್ಣ ದರ್ಬಾರು. ಶಂಕು ಸ್ಥಾಪನೆ ಘಟನೆಗೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ವಿಧಾನಸೌಧಕ್ಕೆ ಶುಕ್ರವಾರ ರಾತ್ರಿ ದೀಪಾಲಂಕಾರ ಮಾಡಲು ಕೃಷ್ಣ ಆದೇಶಿಸಿದ್ದರು. ಅದೇರೀತಿ, ಶಂಕುಸ್ಥಾಪನೆಯ 50 ವರ್ಷಗಳ ನೆನಪನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಇದೇ ಮೋದಲ ಬಾರಿಗೆ ವಿಧಾನಸೌಧ ಕಟ್ಟಡಕ್ಕೆ ಸೌತ್‌ಬ್ಲಾಕ್‌ ಸೇರ್ಪಡೆಗೊಳಿಸುವ ಕೆಲಸಕ್ಕೆ ಚಾಲನೆ ದೊರೆತಿದೆ. ವಿಧಾನಸೌಧದ ಬಲಬದಿಯಲ್ಲಿ ಸರ್ಕಾರಿ ಮುದ್ರಣಾಲಯವಿರುವ ಜಾಗೆಯಲ್ಲಿ 100 ಕೋಟಿ ರುಪಾಯಿಗಳ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಅಂದಹಾಗೆ, 1956 ರಲ್ಲಿ ವಿಧಾನಸೌಧ ಪೂರ್ಣಗೊಂಡಾಗ ಅದಕ್ಕೆ ತಗುಲಿದ್ದ ವೆಚ್ಚ 1.84 ಕೋಟಿ ರುಪಾಯಿ !

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+