ವಾಷಿಂಗ್ಟನ್ ಡಿಸಿಯ ಕವನ ಪ್ರಶಸ್ತಿ ಸ್ಪರ್ಧೆಗೆ ಬೆಂಗಳೂರಿನ ಉಜ್ವಲ
ಬೆಂಗಳೂರು : ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ವಿಶ್ವ ಕಿರಿಯರ ಕವನ ಪ್ರಶಸ್ತಿಗಾಗಿ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಿರಿಯರ ಕವನ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರಿನ ಉಜ್ವಲ ತಿರುಮೂರ್ತಿ ಆಹ್ವಾನಿತರಾಗಿದ್ದಾರೆ.
ಮೌಂಟ್ ಕಾರ್ಮೆಲ್ ಕಾಲೇಜಿನ ಪದವೀಧರೆಯಾದ ಉಜ್ವಲ ಪ್ರಸ್ತುತ ಭಾರತೀಯ ವಿದ್ಯಾ ಭವನದಲ್ಲಿ ಪಬ್ಲಿಕ್ ರಿಲೇಶನ್ಸ್ ಕೋರ್ಸ್ ಮಾಡುತ್ತಿದ್ದಾರೆ. ಉಜ್ವಲ ಕವನ ಬರೆಯಲಾರಂಭಿಸಿದ್ದು ಇತ್ತೀಚೆಗಷ್ಟೇ. ಮಾರ್ಚ್ ನಲ್ಲಿ ಪೊಯೆಟ್ರಿ ಡಾಟ್ಕಾಮ್ ವೆಬ್ ಸೈಟ್ನಲ್ಲಿ ಉಜ್ವಲರ ಕವನ ದ ‘ಪವರ್ ಆಫ್ ಫ್ರೆಂಡ್ಶಿಪ್’ ತಿಂಗಳ ಉತ್ತಮ ಕವನವಾಗಿ ಆಯ್ಕೆಯಾಗಿತ್ತು. ಈಗ ವಿಶ್ವ ಕಿರಿಯರ ಕವನ ಪ್ರಶಸ್ತಿಗೆ ಸ್ಪರ್ಧಿಸಲು ಆಹ್ವಾನ ಬಂದಿರುವುದು ಕಂಡು ಉಜ್ವಲ ತುಂಬ ಖುಷಿಯಾಗಿದ್ದಾರೆ. ಆಗಸ್ಟ್ನಲ್ಲಿ ನಡೆಯಲಿರುವ ಕವಿಗಳ ಅಂತರರಾಷ್ಟ್ರೀಯ ಸೊಸಾೖಟಿಯ ವಾರ್ಷಿಕೋತ್ಸವದಲ್ಲಿಯೂ ಅವರು ಭಾಗವಹಿಸಲಿದ್ದಾರೆ.
ಹಣದ ತೊಂದರೆ
ಆಹ್ವಾನ ಬಂದಿರುವುದು ಕಂಡು ಖುಷಿಯಾದರೂ ಶುರುವಿಗೆ ಈ ಸೊಸಾೖಟಿಯ ಬಗ್ಗೆ ಸ್ವಲ್ಪ ಸಂಶಯ ಬಂದಿತ್ತು. ಆದರೆ ಅಪ್ಪ ಅಮ್ಮ ಅಮೆರಿಕಾದಲ್ಲಿನ ನೆಂಟರ ಬಳಿ ಇದು ನೋಂದಾಯಿತ ಸೊಸಾೖಟಿ ಎನ್ನುವುದನ್ನು ದೃಢ ಪಡಿಸಿಕೊಂಡಿದ್ದಾರೆ.
ಈ ಸ್ಪರ್ಧೆಗೆ ಪ್ರವೇಶ ಶುಲ್ಕವೇ 500 ಡಾಲರ್. ಆಕೆಯ ವಾಷಿಂಗ್ಟನ್ ಡಿಸಿ ಪ್ರವಾಸಕ್ಕೆ ಒಟ್ಟು 1.25 ಲಕ್ಷ ರೂ. ಖರ್ಚಾಗುತ್ತದೆ. ಏರ್ ಟಿಕೇಟ್ ವ್ಯವಸ್ಥೆಯಾಗಿದೆ. ಆದರೆ ಪ್ರವೇಶ ಶುಲ್ಕ ಮತ್ತು ಅಲ್ಲಿನ ವಸತಿಗೆ ಹಣ ಸಾಲದಾಗಿದೆ. ದಾನಿಗಳಿಂದ ಹಣ ನಿರೀಕ್ಷಿಸುತ್ತಿದ್ದೇವೆ ಎಂದು ಉಜ್ವಲರ ಅಪ್ಪ ತಿರುಮೂರ್ತಿ ಹೇಳುತ್ತಾರೆ. ಉಜ್ವಲ ಅವರ ಫೋನ್ ನಂ - 080- 8381628.
ಉಜ್ವಲ ಪ್ರಶಸ್ತಿ ಗೆದ್ದರೆ 20 ಸಾವಿರ ಡಾಲರ್ನಗದು ಹಾಗೂ ‘ಫ್ಲಾರೆನ್ಸ್ ಹೆಂಡರ್ಸನ್ ಆ್ಯಂಡ್ ವಿಲ್ಲಾರ್ಡ್ ಸ್ಕಾಟ್ ಪ್ರಶಸ್ತಿ ’ ಅವಳದಾಗುತ್ತದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications