ಇವರು ಮುಷರ್ರಫ್
ಜನನ : 11.08.1943
ಜನ್ಮ ಸ್ಥಳ : ಭಾರತ (ಹಳೆಯ ದೆಹಲಿಯ ರಿಯಾಗಂಜ್ನಲ್ಲಿರುವ ನೆಹರ್ವಾಲಿ ಹವೇಲಿ). ದೇಶ ವಿಭಜನೆ ಸಂದರ್ಭದಲ್ಲಿ ಮುಷರ್ರಫ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಯಿತು.
ತಂದೆ, ತಾಯಿ : ಜರೀಂ, ಮುಷಾರಪುದ್ದೀನ್
ವಿದ್ಯಾರ್ಹತೆ : ಪದವೀಧರ, ರಾಯಲ್ ಕಾಲೇಜ್ ಆಫ್ ಡಿಫೆನ್ಸ್ನಿಂದ ವಾರ್ ಕೋರ್ಸ್.
ವೈವಾಹಿಕ ಜೀವನ : 1968 ರಲ್ಲಿ ಬೇಗೆ ಷೆಬಾ ಅವರೊಂದಿಗೆ ಮದುವೆ. ಇಬ್ಬರು ಮಕ್ಕಳು. ಇಬ್ಬರಿಗೂ ಮದುವೆಯಾಗಿದೆ. ಮಗ ಬಿಲಾಲ್ (28) ಅಮೇರಿಕಾದಲ್ಲಿ ವಾಸ. ಮಗಳು ಐಲಾ ಕರಾಚಿಯಲ್ಲಿ .
ಧರ್ಮ, ನಂಬುಗೆ : ಶಿಯಾದಲ್ಲಿ ಜನಿಸಿದರೂ ಸುನ್ನಿ ಮಾರ್ಗ ಅನುಸರಣೆ. ಶಿಯಾಗಳ ಬಗ್ಗೆ ದ್ವೇಷ ಭಾವ. ದಿನಕ್ಕೆ 5 ಬಾರಿ ನಮಾಜು ಮಾಡುವ ನಿಷ್ಠಾವಂತ ಮುಸ್ಲಿಂ.
ಸ್ಫೂರ್ತಿ : ಆಧುನಿಕ ಟರ್ಕಿಯ ಜನಕ ಕಮಾಲ್ ಪಾಶಾ
ಬಲ್ಲ ಭಾಷೆಗಳು : ಟರ್ಕಿ ಭಾಷೆಯೆಂದರೆ ನೀರು ಕುಡಿದಷ್ಟು ಸಲೀಸು. ಇಂಗ್ಲೀಷ್, ಉರ್ದು ಕೂಡ ಚೆನ್ನಾಗಿ ಗೊತ್ತು.
ಸಂದ ಹುದ್ದೆಗಳು : 1964 ರಲ್ಲಿ ಪಾಕಿಸ್ತಾನ ಸೇನೆ ಸೇರ್ಪಡೆ. 1965, 1971 ರ ಭಾರತ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡ ಅನುಭವ. 1998 ರಲ್ಲಿ ಸೇನೆಯ ಮುಖ್ಯಸ್ಥ . 1999 ರಲ್ಲಿ ಪಾಕ್ ಸರ್ವಾಧಿಕಾರಿ. 2001 ರಲ್ಲಿ ಪಾಕ್ ಅಧ್ಯಕ್ಷರಾಗಿ ಸ್ವ ಘೋಷಣೆ.
ಇವುಗಳೆಲ್ಲಾ ಇಷ್ಟ : ಟೆನ್ನಿಸ್, ಬ್ಯಾಂಡ್ಮಿಂಟನ್, ಗಾಲ್ಫ್ , ಬ್ರಿಡ್ಜ್ ಆಟಗಳ ಆಡುತ್ತಾರೆ. ನಾಯಿ ಸಾಕುತ್ತಾರೆ, ನಾಯಿಗಳನ್ನು ನಂಬುತ್ತಾರೆ. ಪಂಜಾಬಿ ಜಾನಪದ ಸಂಗೀತ, ಗಜಲ್ಗಳಿಗೆ ಮೈ ಮರೆಯುತ್ತಾರೆ. ಆಗಾಗ ಹಳೆಯ ಇಂಗ್ಲೀಷ್ ಸಿನಿಮಾ ನೋಡುವುದೂ ಉಂಟು. ಪಾಶ್ಚಾತ್ಯ ಸಂಗೀತ ಆರನೇ ಪ್ರಾಣ. ವಿಸ್ಕಿ ಕುಡಿಯುತ್ತಾರೆ.
ಅನುಯಾಯಿಗಳು ಹೇಳುವಂತೆ-
ಆಧುನಿಕ ಭಾವಗಳ ಉದಾರವಾದಿ. ನೀತಿಪರ ಅಧಿಕಾರಿ. ಭೂಮಂಡಲದ ಮೇಲೆ ಅಲ್ಲಾನ ಹೊಸದೂತ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications