ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ ಗಣಿಗಾರಿಕೆ ಮುಂದುವರಿಕೆಗೆ ಉಲ್ಲಾಸ್‌ ಕಾರಂತ್‌ವಿರೋಧ

By Staff
|
Google Oneindia Kannada News

ಮಂಗಳೂರು : ಡಾ. ಅನಂತ ಮೂರ್ತಿಯವರ ಪ್ರವೇಶದೊಂದಿಗೆ ತುಂಗಾ ಮೂಲ ಉಳಿಸಿ ಚಳುವಳಿಗೆ ಮತ್ತೆ ಕಾವು ಬಂದಿರುವಾಗಲೇ ಇತ್ತ ವನ್ಯ ಮೃಗ ಸಂರಕ್ಷಣಾ ಕಾರ್ಯಕರ್ತ, ವಿಜ್ಞಾನಿ ಉಲ್ಲಾಸ್‌ಕಾರಂತ್‌ ಗಣಿಗಾರಿಕೆ ವಿರೋಧೀ ಚಳುವಳಿಯನ್ನು ಬೆಂಬಲಿಸಿದ್ದಾರೆ.

ಕುದುರೆಮುಖ ವಲಯದಲ್ಲಿ ಗಣಿಗಾರಿಕೆ ಮುಂದುವರೆಸಲು ಕೆಐಒಸಿಎಲ್‌ಗೆ ಅವಕಾಶ ಮಾಡಿಕೊಡುವುದನ್ನು ವಿರೋಧಿದ ಅವರು ರಾಷ್ಟ್ರೀಯ ಉದ್ಯಾನವನವನ್ನು ರಕ್ಷಿಸುವುದು ಪ್ರತಿಯಾಬ್ಬ ಪ್ರಜೆಯ ಕರ್ತವ್ಯವಾಗಿರುವಾಗ ಸರಕಾರವೇ ಅದನ್ನು ಹಾಳುಗೆಡವಲು ಯತ್ನಿಸುತ್ತಿರುವುದು ಖಂಡನೀಯ ಎಂದರು.

ಅವರು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಹುಲಿ ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಈಗಾಗಲೇ ಕೆಐಒಸಿಎಲ್‌ನ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟದ ಜೀವ ವೈವಿಧ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಗಣಿಗಾರಿಕೆ ಮುಂದುವರೆಸುವ ಈಗಿನ ನಿರ್ಧಾರಕ್ಕೆ ಕೆಲವೇ ವರ್ಷಗಳ ಅಂತರಲ್ಲಿ ನಾವು ವಿಷಾದಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಕಾರಂತ್‌ ಎಚ್ಚರಿಸಿದರು.

(ಮಂಗಳೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X