ಕೇರಳ : ಮಲ್ಲಪುರಂ ಜಿಲ್ಲೆಯ ಮನೆಮನೆಯಲ್ಲೂ ಮೊಬೈಲ್ ಫೋನ್
ಮಲ್ಲಪುರಂ : ಅತಿ ಹೆಚ್ಚು ಸಾಕ್ಷರರ ನಾಡಾದ ಕೇರಳ, ಅತಿ ಹೆಚ್ಚು ಮೊಬೈಲ್ ಫೋನ್ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಕಾಲ ದೂರವೇನಿಲ್ಲ. ಕೇರಳದ ಮಲ್ಲಪುರಂ ಜಿಲ್ಲೆ ಈ ನಿಟ್ಟಿನಲ್ಲಿ ದಾಖಲೆಯ ಹೆಜ್ಜೆ ಇಟ್ಟಿದೆ. ಜಿಲ್ಲೆಯಲ್ಲಿರುವ ಪ್ರತಿ ಹತ್ತು ಜನರ ಪೈಕಿ 7 ಮಂದಿಯ ಬಳಿ ಮೊಬೈಲ್ ಫೋನ್ ಇದೆ.
ನಿಮಗೆ ಅಚ್ಚರಿ ಎನಿಸಿದರೂ, ಇದು ಸತ್ಯ. ಮಲ್ಲಪುರಂ ಜಿಲ್ಲೆಯ ಪ್ರತಿ ತಾಲೂಕಿನ, ಪ್ರತಿ ಗ್ರಾಮದ ಪ್ರತಿಯಾಂದು ಮನೆಯವರೂ ದೂರವಾಣಿ ಸೌಲಭ್ಯ ಒದಗಿಸುವಂತೆ ಕೋರಿ ವರ್ಷಗಳ ಹಿಂದೆಯೇ ದೂರವಾಣಿ ಇಲಾಖೆಗೆ ಅರ್ಜಿ ಹಾಕಿದ್ದಾರೆ. ಆದರೆ, ದೂರಸಂಪರ್ಕ ಇಲಾಖೆ ಈವರೆಗೆ ಕೇವಲ ಶೇ.25 ಮನೆಗಳಿಗೆ ಮಾತ್ರ ದೂರವಾಣಿ ಸೌಲಭ್ಯ ಕಲ್ಪಿಸಲು ಶಕ್ತವಾಗಿದೆ.
ಈ ಜಿಲ್ಲೆಯ ಜನತೆಯ ದೂರವಾಣಿ ಅಗತ್ಯವನ್ನು ಮನಗಂಡ ಎಸ್ಕೋಟೆಲ್ ಮೊಬೈಲ್ ಫೋನ್ ಕಂಪನಿಯು ಜಿಲ್ಲೆಯ ಪ್ರತಿಯಾಬ್ಬರಿಗೂ ಸಾಲದ ರೂಪದಲ್ಲಿ ಮೊಬೈಲ್ ಫೋನ್ ನೀಡುವ ವಿನೂತನ ಯೋಜನೆಯನ್ನು ಪ್ರಕಟಿಸಿತು. ಸಂಸ್ಥೆಯ ಯೋಜನೆ ಫಲನೀಡಿತು. ಪ್ರಥಮ ಹಂತದಲ್ಲೇ ಜಿಲ್ಲೆಯ 12 ಸಾವಿರಕ್ಕೂ ಹೆಚ್ಚು ಗ್ರಾಹಕರು ಮೊಬೈಲ್ ಫೋನ್ ಖರೀದಿಸಲು ಮುಂದಾದದರು.
ಸಾಲ ಯೋಜನೆಯಲ್ಲಿ ಮೊದಲು ಗ್ರಾಹಕರಿಂದ ಕೇವಲ ಕನಿಷ್ಠ ಮೊತ್ತವನ್ನು ಪಡೆದು, ಫೋನ್ ನೀಡಿ, ಆನಂತರ ಬಾಕಿ ಹಣವನ್ನು ಮನೆಮನೆಗೇ ಬಂದು ವಸೂಲಿ ಮಾಡಿಕೊಂಡು ಹೋಗುವುದಾಗಿ ಸಂಸ್ಥೆ ಸಾರಿತು. ಜನತೆ ಒಪ್ಪಿತು. ಸಂಸ್ಥೆ ಸೆಲ್ ಫೋನ್ ದರವನ್ನು 4,500 - 5000ಕ್ಕೆ ನಿಗದಿ ಮಾಡಿತು. ಕೈಗೆಟಕುವ ದರದಲ್ಲಿ ದೂರವಾಣಿ ಸಿಕ್ಕಾಗ ಜನ ಮುಗಿಬಿದ್ದರು.
ಸೆಲ್ ಫೋನ್ ಈ ರೀತಿಯ ಕ್ರಾಂತಿಯಲ್ಲಿ ತೊಡಗಿದ್ದನ್ನು ಕಂಡರೂ, ದೂರವಾಣಿ ಇಲಾಖೆ ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲೇ ಇದೆ. ತನ್ನ ಬಳಿ ಇರುವ ಅರ್ಜಿಗಳನ್ನು ವಿಲೆ ಮಾಡಿ, ತತ್ಕ್ಷಣವೇ ದೂರವಾಣಿ ಸೌಲಭ್ಯ ಒದಗಿಸುವ ಚಿಂತೆಯೂ ಅದಕ್ಕಿದ್ದಂತಿಲ್ಲ. ಹೀಗಾಗಿ ಜನ ದೂರಸಂಪರ್ಕ ಇಲಾಖೆಯನ್ನು ಮರೆತರು, ಮೊಬೈಲ್ ಕಂಪನಿಯನ್ನು ಆದರಿಸಿದರು.
ಈಗ ಮಲ್ಲಪುರಂ ಜಿಲ್ಲೆಯ ಮನೆಮನೆಯಲ್ಲೂ ಮೊಬೈಲ್ ಫೋನ್ಗಳು ರಾರಾಜಿಸುತ್ತಿವೆ. ಎಸ್.ಟಿ.ಡಿ. ಬೂತ್ಗಳು, ಸಾರ್ವಜನಿಕ ದೂರವಾಣಿ ಕೇಂದ್ರಗಳು ಬಿಕೋ ಎನ್ನುತ್ತಿವೆ. ಹಲವು ಎಸ್.ಟಿ.ಡಿ. ಬೂತ್ಗಳು ಬಾಗಿಲೂ ಮುಚ್ಚಿವೆ. ದೂರಸಂಪರ್ಕ ಇಲಾಖೆ ಇನ್ನೂ ದಿವ್ಯ ನಿರ್ಲಕ್ಷ್ಯ ತಾಳದಿರಲಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications