ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀನ್‌ದಾರ್‌ ಅಂಜುಮಾನ್‌ ಸಂಸ್ಥೆಗೆ ಕೋರ್ಟ್‌ ನೋಟಿಸ್‌

By Staff
|
Google Oneindia Kannada News

ಬೆಂಗಳೂರು : ಅಕ್ರಮ ಚಟುವಟಿಕೆಗಳ ಕುರಿತು ವಿಚಾರಣೆ ನಡೆಸುತ್ತಿರುವ ದೆಹಲಿಯ ನ್ಯಾಯಪೀಠವು ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳ ಚರ್ಚ್‌ಗಳಲ್ಲಿ ಕಳೆದ ವರ್ಷ ಸರಣಿ ಬಾಂಬ್‌ ಸ್ಫೋಟಿಸಿದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ದೀನ್‌ದಾರ್‌ ಅಂಜುಮನ್‌ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದೆ.

ಚರ್ಚ್‌ ಬಾಂಬ್‌ ಸ್ಫೋಟಗಳಿಗೆ ಸಂಬಂಧಿಸಿದಂತೆ ಸಂಸ್ಥೆಯನ್ನು ಕಾನೂನು ಬಾಹೀರ ಸಂಸ್ಥೆ ಎಂದು ಘೋಷಿಸಬಾರದೇಕೆ ಎಂದು ವಿವರಣೆ ಕೇಳಿ ನ್ಯಾಯಪೀಠ ನೋಟಿಸ್‌ ನೀಡಿದೆ. ಈ ಸಂಸ್ಥೆಯನ್ನು ಕೇಂದ್ರ ಸರಕಾರ ಒಂದು ಅಕ್ರಮ ಸಂಸ್ಥೆ ಎಂದು ಘೋಷಿಸಿತ್ತು.

ಸಂಸ್ಥೆಯನ್ನು ನಿಷೇಧಿಸಲು ಹಾಗೂ ಅಕ್ರಮ ಸಂಸ್ಥೆ ಎಂದು ಸಾರಲು ಸಾಕಷ್ಟು ಸಕಾರಣಗಳು ಇದೆಯೋ ಇಲ್ಲವೋ ಎಂದು ನಿರ್ಧರಿಸಲು ರಚಿತವಾಗಿರುವ ದೆಹಲಿಯ ಹೈಕೋರ್ಟ್‌ನ ನ್ಯಾಯಮೂರ್ತಿ ಮನ ಮೋಹನ್‌ ಸರೀನ್‌ ನೇತೃತ್ವದ ನ್ಯಾಯಪೀಠ ಈ ಸಂಬಂಧ ಸಂಸ್ಥೆಗೆ ವಿವರಣೆ ಸಲ್ಲಿಸುವಂತೆ ಆದೇಶಿಸಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X