ಕುಂದಾಪುರ :ರಸ್ತೆ ಅಪಘಾತದಲ್ಲಿ ನೆಲಮಂಗಲದ11 ಮಂದಿ ಸಾವು
ಕುಂದಾಪುರ : ಮಂಗಳೂರಿನಿಂದ ಮುಂಬೈಕಡೆಗೆ ಹೊರಟಿದ್ದ ಖಾಸಗಿ ಬಸ್ಸೊಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಾಟಾ ಸುಮೋಗೆ ಡಿಕ್ಕಿ ಹೊಡೆದಾಗ ಸಂಭವಿಸಿದ ಭೀಕರ ದುರಂತದಲ್ಲಿ 11 ಮಂದಿ ಮೃತರಾಗಿದ್ದಾರೆ.
ಟಾಟಾ ಸುಮೋ ವಾಹನ ಭಟ್ಕಳದಿಂದ ನೆಲಮಂಗಲ ಕಡೆಗೆ ಸಾಗುತ್ತಿದ್ದು , ರಾಷ್ಟ್ರೀಯ ಹೆದ್ದಾರಿ 17ರ ತ್ರಾಸಿ ಬಳಿಯ ಐಸ್ ಪ್ಲಾಂಟ್ ಎದುರು ಈ ದುರಂತ ನಡೆಯಿತು. ಮೃತರಾದ 11 ಮಂದಿಯೂ ಟಾಟಾ ಸುಮೋದಲ್ಲಿ ಪ್ರಯಾಣಿಸುತ್ತಿದ್ದರು. ಅವರು ನೆಲಮಂಗಲದ ನಿವಾಸಿಗಳಾದ ಸಂಪತ್ ಕುಮಾರ್ (29), ಭಾಸ್ಕರ್ (23), ಬೀರಲಿಂಗಪ್ಪ (38), ಕುಮಾರ (23), ಬೈಲಪ್ಪ (22), ಅರುಣ್ ಕುಮಾರ್ (23), ತಮ್ಮಯ್ಯ (23), ಗೋವಿಂದರಾಜ (25), ಹಾಗೂ ಮಹೇಶ್ (28) ಎಂದು ಗುರುತಿಸಲಾಗಿದೆ.
ಟಾಟಾ ಸುಮೋ ವಾಹನವನ್ನು ನೆಲಮಂಗಲದ ಸುಶ್ಮಾ ಡಾಬಾ ಸೆಂಟರಿನ ಮಾಲಕರಿಂದ ಬಾಡಿಗೆಗೆ ಪಡೆದುಕೊಂಡು ಈ 11 ಮಂದಿ ಯುವಕರು ತೀರ್ಥ ಯಾತ್ರೆಗೆ ಹೊರಟಿದ್ದರು. ವಾಹನಗಳೆರಡು ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋ , ಬಸ್ಸಿನಡಿ ಸಿಕ್ಕಿ ನಜ್ಜು ಗುಜ್ಜಾಗಿತ್ತು.
(ಇನ್ಫೋ ವಾರ್ತೆ)