Get Updates
Get notified of breaking news, exclusive insights, and must-see stories!

ತನಿಖೆ ಬೇಡ, ನ್ಯಾಯ ಬೇಕು- ತಮಿಳುನಾಡಲ್ಲಿ ಮುಂದುವರಿದ ಗೊಂದಲ

* ಪಾಪ್ರಿ ಶ್ರೀ ರಾಮನ್‌

ಚೆನ್ನೈ : ಕೇಂದ್ರ ಸರ್ಕಾರ ಬೆಟ್ಟು ಮಾಡಿ ತೋರಿಸಿ, ಎಚ್ಚರಿಕೆ ಕೊಟ್ಟಿದ್ದರೂ ತಮಿಳುನಾಡಿನಲ್ಲಿ ಗೊಂದಲಗಳು ಮುಂದುವರೆದಿವೆ...

  • ಜೂನ್‌ 30ರಂದು ನಡೆದ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಬಂಧನ ಪ್ರಕರಣದ ತನಿಖೆ ಬೇಡ, ಆದರೆ ಕಟುವಾಗಿ ವರ್ತಿಸಿರುವ ಪೊಲೀಸರ ವಿರುದ್ಧ ಕ್ರಮ ಬೇಕು ಎನ್ನುತ್ತಿದೆ ಡಿಎಂಕೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಜುಲೈ 7ರಂದು ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
  • ಫೊರೆನ್ಸಿಕ್‌ ಪರಿಣತ ಪಿ.ಚಂದ್ರಶೇಖರ್‌ ಅವರ ಪ್ರಕಾರ ತಮಿಳುನಾಡು ಪೊಲೀಸರು ಬಹಿರಂಗ ಪಡಿಸಿರುವ ಕರುಣಾನಿಧಿ ಬಂಧನದ ವಿಡಿಯೋ ಕೆಸೆಟ್ಟು ಸಾಕಷ್ಟು ತಿದ್ದಿ ತೀಡಲಾಗಿರುವ ಪ್ರತಿ. ಸನ್‌ ಟಿವಿ ತೋರಿದ್ದ ಕೆಸೆಟ್ಟಿನ ಹುರುಳನ್ನು ಸುಳ್ಳಾಗಿಸುವುದೇ ಇದರ ಹಿಂದಿನ ಉದ್ದಿಶ್ಯ ಎಂಬುದು ಸ್ಪಷ್ಟ. ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ಮುರಸೋಳಿ ಮಾರನ್‌ ಪುತ್ರ ಕಲಾನಿಧಿ ಮಾರನ್‌ ಒಡೆತನದ ಸನ್‌ ಟಿವಿ ಆ ಕೆಸೆಟ್ಟನ್ನು ತೋರಿದ್ದಾದರೂ ಯಾಕೆ ? ಹೇಗೆ?
  • ಕರುಣಾನಿಧಿ, ಅವರ ಪುತ್ರ ಎಂ.ಕೆ.ಸ್ಟಾಲಿನ್‌, ಮುರಸೋಳಿ ಮಾರನ್‌ ಮತ್ತಿತರರಿಗೆ ಜಾಮೀನು ನೀಡಿರುವ ಚೆನ್ನೈ ಮುಖ್ಯ ನ್ಯಾಯಮೂರ್ತಿ ಅಶೋಕ್‌ ಕುಮಾರ್‌ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಕಾರಣಕ್ಕೆ ಅವರು ಹೆಚ್ಚು ಭದ್ರತೆ ಒದಗಿಸುವಂತೆ ಕೋರಿದ್ದಾರೆ.
  • ನಾವು ತನಿಖೆಗೆ ಮುಗಿಯುವವರೆಗೆ ಕಾದು ಕೂರಲು ಸಿದ್ಧರಿಲ್ಲ. ಮಾನವೀಯ ಮೌಲ್ಯಗಳನ್ನು ಬದಿಗೊತ್ತಿ ಕ್ರೌರ್ಯ ಮೆರೆದಿರುವ ಪೊಲೀಸರ ವಿರುದ್ಧ ತಕ್ಷಣವೇ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಡಿಎಂಕೆ ಪಕ್ಷದ ಸಂಸತ್‌ ಸದಸ್ಯ ಎಸ್‌.ಗಣೇಶನ್‌ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದಾರೆ.
  • ಪ್ರಕರಣದ ತೀವ್ರತೆಯನ್ನು ಹಂತಹಂತವಾಗಿ ತಣ್ಣ ವಾಗಿಸುವ ಯತ್ನವೇ ತನಿಖೆ ಎನ್ನುತ್ತಾರೆ ಡಿಎಂಕೆ ವಕೀಲರಾದ ಆರ್‌.ಎಸ್‌.ಭಾರತಿ.
  • ತನಿಖಾ ಸಮಿತಿ ವರದಿಯನ್ನೇ ಸಲ್ಲಿಸುವುದಿಲ್ಲ ಅಥವಾ ಜಾರಿಗೆ ತರುವಂಥ ಯಾವುದೇ ಶಿಫಾರಸ್ಸನ್ನೂ ಮಾಡುವುದಿಲ್ಲ ಎಂಬುದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಇಳಾ ಗಣೇಶನ್‌ ಅವರ ಅಭಿಪ್ರಾಯ.
  • ಕ್ರೌರ್ಯ ತೋರಿರುವ ಪೊಲೀಸರನ್ನು ಅಮಾನತ್ತುಗೊಳಿಸುವಂತೆ ರಾಜ್ಯ ಬಿಜೆಪಿ ಘಟಕ ರಾಜ್ಯಪಾಲ ಸಿ.ರಂಗರಾಜನ್‌ ಅವರನ್ನು ಕೋರಲಿದೆ.
(ಐಎಎನ್‌ಎಸ್‌)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+