ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರಾಕಾರ ಮಳೆ! ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಮೇಲೆ ನೆರೆ
ಸುಬ್ರಹ್ಮಣ್ಯ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಮಾರಧಾರಾ ನದಿ ಸೇತುವೆ ಮೇಲೆ ನೆರೆ ಬಂದಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಬುಧವಾರ ಬೆಳಗಿನಿಂದ ಸೇತುವೆ ಮೇಲೆ ನೀರು ಹರಿಯುತ್ತಿದ್ದು , ಇಲ್ಲಿಗೆ ಸಮೀಪದ ಹೊಸಮಠ ಸೇತುವೆಯ ಮೇಲೆಯೂ ಪ್ರವಾಹ ಉಕ್ಕಿಹರಿಯುತ್ತಿದೆ. ಸುಬ್ರಹ್ಮಣ್ಯ ಹಾಗೂ ಕಡಬ ಸೇತುವೆ ಬಳಿ ಪೊಲೀಸರು ಕಾವಲು ನಿಂತಿದ್ದು, ಈ ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳ್ತಂಗಡಿ, ಸುಬ್ರಹ್ಮಣ್ಯ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಪ್ರವಾಹದಿಂದ ಆವೃತವಾಗಿವೆ. ತಗ್ಗಾದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ವಾಹನಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಬೆಳ್ತಂಗಡಿಯಲ್ಲಿ 28.8 ಮಿಮೀಟರ್ ಮತ್ತು ಪುತ್ತೂರಿನಲ್ಲಿ 28.4 ಮೀಮೀ ಮಳೆಬಿದ್ದಿದೆ.
(ಇನ್ಫೋ ವಾರ್ತೆ)
Story first published: Monday, July 9, 2001, 5:30 [IST]