ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾಯಮೂರ್ತಿ ರಾಮನ್ ತನಿಖಾ ಸಮಿತಿಗೆ ಕರುಣಾನಿಧಿ ಬಹಿಷ್ಕಾರ
ಚೆನ್ನೈ : ಜೂನ್ 30 ರಂದು ತಮ್ಮ ಬಂಧನದ ಸಮಯದಲ್ಲಿ ಹದ್ದು ಮೀರಿದ ಪೊಲೀಸರ ವರ್ತನೆಯ ಬಗ್ಗೆ ತನಿಖೆ ನಡೆಸಲು ನಿಯಮಿಸಿರುವ ನ್ಯಾಯಮೂರ್ತಿ ಎ.ರಾಮನ್ ಸಮಿತಿಯ ತನಿಖೆಯನ್ನು ಬಹಿಷ್ಕರಿಸುವುದಾಗಿ ಡಿಎಂಕೆ ಹಿರೀಕ ಎಂ. ಕರುಣಾನಿಧಿ ಘೋಷಿಸಿದ್ದಾರೆ.
ಅಪೊಲೊ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ವಿಷಯ ತಿಳಿಸಿದರು. ಜೈಲಿನಿಂದ ಬಿಡುಗಡೆಯಾದ ನಂತರ ಆರೋಗ್ಯ ತಪಾಸಣೆಗಾಗಿ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಕರುಣಾನಿಧಿ, ವೈದ್ಯಕೀಯ ಉಪಚಾರದಿಂದ ಚೇತರಿಸಿಕೊಂಡಂತೆ ಕಾಣುತ್ತಿದ್ದರು.
ತಮ್ಮ ಹಾಗೂ ಇಬ್ಬರು ಕೇಂದ್ರ ಸಚಿವರಾದ ಮುರಸೋಳಿ ಮಾರನ್ ಹಾಗೂ ಟಿ.ಆರ್. ಬಾಲು ಅವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಗೊಂಡಿರುವ ತನಿಖಾ ಸಮಿತಿ, ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ನೀಡಿರುವ ಸೂಚನೆಗೆ ತಕ್ಕನಾಗಿಲ್ಲ . ಆ ಕಾರಣ, ತಾವು ತನಿಖಾ ಸಮಿತಿಯನ್ನು ಬಹಿಷ್ಕರಿಸುವುದಾಗಿ ಕರುಣಾನಿಧಿ ಹೇಳಿದರು.
(ಇನ್ಫೋ ವಾರ್ತೆ)
Comments
Story first published: Monday, July 9, 2001, 5:30 [IST]