ಕನ್ನಡ ಸಂಖ್ಯಾಫಲಕ : ಸರ್ಕಾರಿ ವಾಹನಗಳ ಮೇಲೇಕೆ ಪೊಲೀಸರ ಪ್ರೀತಿ?
ಬೆಂಗಳೂರು : ಆಟೋರಿಕ್ಷಾವಾಲಾಗಳು ಮತ್ತೆ ಸೊಲ್ಲೆತ್ತಿದ್ದಾರೆ. ಸಂಖ್ಯಾಫಲಕ ಕೇವಲ ಕನ್ನಡದಲ್ಲಿ ಇರುವ ಸರ್ಕಾರಿ ವಾಹನಗಳನ್ನು ಪೊಲೀಸರು ಕಂಡೂ ಕಾಣದಂತಿರುತ್ತಾರೆ. ನಮಗಾದರೆ ಜುಲ್ಮಾನೆ. ಇದು ತರವಲ್ಲ ಎಂಬುದು ಅವರ ದೂರು.
ಸಂಖ್ಯಾಫಲಕ ಕೇವಲ ಕನ್ನಡದಲ್ಲಿ ಇರುವ ಒಂದು ಆಟೋಗೆ 300 ರುಪಾಯಿ ದಂಡ ವಿಧಿಸಿದ ಪೊಲೀಸರು, ಮರು ಕ್ಷಣವೇ ಹಾದುಹೋದ ಕನ್ನಡ ಸಂಖ್ಯಾಫಲಕ ಇರುವ ಸರ್ಕಾರಿ ವಾಹನದ ಮುಲಾಜಿಗೇ ಹೋಗುವು-ದಿಲ್ಲ. ವಿಧಾನಸೌಧ ಹಾಗೂ ಕೆ.ಆರ್.ಸರ್ಕಲ್ಲಲ್ಲಿ ಒಂದೈದು ನಿಮಿಷ ನಿಂತುಕೊಳ್ಳಿ. ಸಂಖ್ಯಾ ಫಲಕ ಕನ್ನಡದಲ್ಲಿ ಮಾತ್ರ ಇರುವ ಮಂತ್ರಿ ಮಹೋದಯರ, ಸರ್ಕಾರಿ ಅಧಿಕಾರಿಗಳ ಅವೆಷ್ಟು ಕಾರುಗಳು ಹೋಗುತ್ತವೋ ನೋಟ್ ಮಾಡಿಕೊಳ್ಳಿ. ಪೊಲೀಸರು ಅವುಗಳನ್ನು ಅಡ್ಡಗಟ್ಟುವ ಗೊಡವೆಗೇ ಹೋಗುವುದಿಲ್ಲ ಎಂದು ಆಟೋ ಚಾಲಕರು ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಂಗೆ ತಿಳಿಸಿದ್ದಾರೆ.
ಕ್ಯಾಬಿನೆಟ್ ಮಂತ್ರಿಗಳ ಅರ್ಧ ಡಜನ್ ಕಾರುಗಳಿಗೆ ಇರುವುದು ಬರೇ ಕನ್ನಡ ಸಂಖ್ಯಾಫಲಕ. ಸರ್ಕಾರಿ ವಾಹನಗಳನ್ನು ನಿಲ್ಲಿಸುವಂತೆ ಯಾರೂ ನಮಗೆ ಆದೇಶ ಕೊಟ್ಟಿಲ್ಲ . ಹಾಗೆ ನಮ್ಮ ವಶಕ್ಕೆ ತೆಗೆದುಕೊಂಡೆವು ಎಂದಿಟ್ಟುಕೊಳ್ಳಿ. ರಾಜಕೀಯದೊತ್ತಡ, ಶಿಫಾರಸ್ಸಿನಿಂದ ವಾಹನಗಳು ಮತ್ತೆ ಓಡುತ್ತವೆ. ನಮ್ಮದೇನೂ ನಡೆಯೋದಿಲ್ಲ ಎನ್ನುತ್ತಾರೆ ಪೊಲೀಸರು.
ಮೋಟಾರು ವಾಹನ ಕಾಯ್ದೆ ಪ್ರಕಾರ ವಾಹನವೊಂದಕ್ಕೆ ಇಂಗ್ಲಿಷ್ ಸಂಖ್ಯಾಫಲಕ ಕಡ್ಡಾಯ. ಬೇಕಾದರೆ ಹೆಚ್ಚುವರಿಯಾಗಿ ಕನ್ನಡ ಸಂಖ್ಯಾಫಲಕವನ್ನೂ ಹಾಕಬಹುದು. ಅಪಘಾತ ವಗೈರೆಗಳಾದಾಗ ಸಂಖ್ಯೆ ದಾಖಲಿಸುವುದು ಸುಲಭವಾಗಲಿ ಎಂಬುದಷ್ಟೇ ಇದರ ಹಿಂದಿನ ಉದ್ದೇಶ ಎನ್ನುತ್ತದೆ ಸರ್ಕಾರ. ಇತ್ತೀಚೆಗೆ ಸುಮಾರು 1000 ಆಟೋಗಳಿಗೆ ಕನ್ನಡ ಸಂಖ್ಯಾಫಲಕದ ಕಾರಣಕ್ಕೆ ಜುಲ್ಮಾನೆ ವಿಧಿಸಲಾಗಿದೆ. ಈಗಾಗಲೇ ಹಠಾತ್ ಮುಷ್ಕರಗಳನ್ನು ನಡೆಸಿರುವ ಆಟೋ ಚಾಲಕರು ಸರ್ಕಾರಿ ವಾಹನಗಳಿಗೆ ವಿನಾಯ್ತಿ ನೀಡುವುದು ಸರಿಯಲ್ಲ ಎಂದು ಮತ್ತೆ ದನಿಯೆತ್ತಿದ್ದಾರೆ. ಇದು ಮತ್ತೊಂದು ಮುಷ್ಕರಕ್ಕೆ ನಾಂದಿಯಾದೀತು. ಸರ್ಕಾರ ಎಚ್ಚೆತ್ತುಕೊಳ್ಳಲಿ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications