Get Updates
Get notified of breaking news, exclusive insights, and must-see stories!

ಗಣಿಗಾರಿಕೆ ವಿರೋಧಿ ಚಳವಳಿಗೆ ಡಾ.ಯು.ಆರ್‌.ಅನಂತಮೂರ್ತಿ

ಶಿವಮೊಗ್ಗ : ಕುದುರೆಮುಖ ಕಬ್ಬಿಣ ಅದಿರುಕಾರ್ಖಾನೆಗೆ ಗಣಿಗಾರಿಕೆ ಮುಂದುವರೆಸಲು ಸರಕಾರ ನೀಡಿರುವ ಅನುಮತಿಯನ್ನು ವಿರೋಧಿಸುವ ಹೋರಾಟದ ನೇತೃತ್ವವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯುಆರ್‌. ಅನಂತಮೂರ್ತಿ ವಹಿಸುವುದರೊಂದಿಗೆ ಹೋರಾಟ ತಿರುವು ಪಡೆದುಕೊಂಡಿದೆ.

ಮ್ಯಾಗ್ಸಸೆ ಪ್ರಶಸ್ತಿ ವಿಜೇತ ರಂಗಕರ್ಮಿ ಕೆ.ವಿ. ಸುಬ್ಬಣ್ಣ ಹಾಗೂ ಹಿರಿಯ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಜೊತೆಗೆ ಯು.ಆರ್‌. ಅನಂತಮೂರ್ತಿ ಸೇರ್ಪಡೆಯಿಂದ ಪರಿಸರವಾದಿಗಳಲ್ಲಿ ಮತ್ತೆ ಭರವಸೆ ಮೂಡಿದೆ. ಪರಿಸರ ರಕ್ಷಣಾ ಹೋರಾಟದಲ್ಲಿ ಕಳೆದ ವಾರದಿಂದ ತಮ್ಮನ್ನು ತೊಡಗಿಸಿಕೊಂಡಿರುವ ಅನಂತಮೂರ್ತಿ ಸದ್ಯಕ್ಕೆ ತೀರ್ಥಹಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ.

ರಾಜಕೀಯದ ನೆರವಿಲ್ಲದೆ, ಎಡ ಮತ್ತು ಬಲ ಪಂಥೀಯ ಧೋರಣೆಗಳಿಂದ ದೂರವಾಗಿ ಈ ಪರಿಸರ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅನಂತಮೂರ್ತಿ ಹೇಳಿದ್ದಾರೆ. ಆದರೆ ಎಲ್ಲ ಸಂಘಟನೆಗಳು ಮತ್ತು ಸಮುದಾಯಗಳ ಸಂಪರ್ಕವನ್ನು ಅವರು ಹೊಂದಿದ್ದು, ಸಾರ್ವಜನಿಕ ಬೆಂಬಲ ಪಡೆದುಕೊಳ್ಳಲು ತೀರ್ಥ ಹಳ್ಳಿಯಲ್ಲಿ ಜುಲೈ 9ರಂದು ಸಾರ್ವಜನಿಕ ಸಭೆಯನ್ನು ಕರೆದಿದ್ದಾರೆ.

ಈಗಾಗಲೇ ಕುದುರೆಮುಖ ಗಣಿಗಾರಿಕಾ ಕಂಪೆನಿಗೆ ಎಚ್ಚರಿಕೆ ನೀಡಿದ್ದು, ಸರಕಾರ ತನ್ನ ನಿರ್ಧಾರವನ್ನು ವಾಪಾಸ್‌ ತೆಗೆದುಕೊಳ್ಳುವವರೆಗೆ ಹೋರಾಟ ಮುಂದುವರೆಯಲಿದೆ. ಈ ತಿಂಗಳ 20 ನೇ ತಾರೀಕಿಗೆ ಕುದುರೆಮುಖ ಕಂಪೆನಿಯ ಗಣಿಗಾರಿಕಾ ಅವಧಿ ಮುಗಿಯಲಿದೆ.

(ಇನ್ಫೋ ವಾರ್ತೆ)

What do you think about this article ?

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+