ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನೀತ್‌ ರಾಜ್‌ಕುಮಾರ್‌ಗೆ ಬೆದರಿಕೆ ಪತ್ರ - ಬಿಗಿ ಪೊಲೀಸ್‌ ರಕ್ಷಣೆ

By Staff
|
Google Oneindia Kannada News

ಬೆಂಗಳೂರು: ಹಲವು ವರ್ಷಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಚಿತ್ರದ ಮೂಲಕ ನಾಯಕ ನಟರಾಗಲು ಭರದ ಸಿದ್ಧತೆ ನಡೆಸಿರುವ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಬೆದರಿಕೆಯ ಪತ್ರವೊಂದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ ಎಂದು ಕನ್ನಡದ ಸಂಜೆ ದಿನಪತ್ರಿಕೆಯಾಂದು ವರದಿ ಮಾಡಿದೆ.

ಬೆದರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗದಂತೆ ಪುನೀತ್‌ ಅವರಿಗೆ ರಾಜ್ಯ ಗುಪ್ತ ದಳದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಬೆದರಿಕೆ ಪತ್ರ ಯಾರಿಂದ, ಯಾವಾಗ ಹಾಗೂ ಏಕೆ ಬಂದಿದೆ ಎಂಬುದು ಇನ್ನೂ ರಹಸ್ಯವಾಗೇ ಇದೆ ಎಂದು ಪತ್ರಿಕೆ ವರದಿ ಮಾಡಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X