Get Updates
Get notified of breaking news, exclusive insights, and must-see stories!

ಕರುಣಾನಿಧಿ ಬಿಡುಗಡೆಗೆ ಜಯಲಲಿತಾ ಆದೇಶ, ತನಿಖೆ ಮುಂದುವರಿಕೆ

ಚೆನ್ನೈ : ನಾಟಕೀಯ ಬೆಳವಣಿಗೆಯಾಂದರಲ್ಲಿ ಡಿಎಂಕೆ ಮುಖಂಡ ಎಂ. ಕರುಣಾನಿಧಿ ಅವರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆದೇಶಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಹಾಗೂ ಕರುಣಾನಿಧಿಯವರ ಇಳಿವಯಸ್ಸನ್ನು ಗಮನಿಸಿ ಜಯಲಲಿತಾ ಈ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, 78 ವರ್ಷದ ಕರುಣಾನಿಧಿ ವಿರುದ್ಧದ ಎಲ್ಲ ಭ್ರಷ್ಟಾಚಾರ ಮೊಕದ್ದಮೆಗಳ ತನಿಖೆ ಮುಂದುವರಿಯಲಿದೆ.

ಕೇಂದ್ರದೊಂದಿಗೆ ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಜಯಲಲಿತಾ ತಮ್ಮ ಬಿಗಿಪಟ್ಟು ಸಡಿಲಿಸಿ ಕರುಣಾನಿಧಿಯವರ ಬಿಡುಗಡೆಗೆ ಒಪ್ಪಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಈ ನಡುವೆ ಕರುಣಾನಿಧಿ ಬಿಡುಗಡೆಗೆ ಸಂಬಂಧಿಸಿದಂತೆ ಕಾಗದಪತ್ರಗಳನ್ನು ಅವರ ವಕೀಲರು ಸಿದ್ಧಪಡಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಒತ್ತಡಕ್ಕೆ ಜಯಲಲಿತಾ ಮಣಿಯುತ್ತಿರುವುದು ಸ್ಪಷ್ಟವಾಗುತ್ತಿದ್ದು , ರಾಷ್ಟ್ರಪತಿ ಆಡಳಿತದ ಭಯದಿಂದಲೇ ಅವರು ಬಂಧಿತ ಕೇಂದ್ರ ಸಚಿವರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ಮಂಗಳವಾರ ವಾಪಸ್ಸು ಪಡೆದುದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+