Get Updates
Get notified of breaking news, exclusive insights, and must-see stories!

ಬಚಾವಾದ ಜಯಲಲಿತಾ, ಎಚ್ಚರಿಕೆ ನೀಡಿ ತೆಪ್ಪಗಾದ ಸಂಪುಟ ಸಭೆ

ನವದೆಹಲಿ : ನಿರೀಕ್ಷೆಯಂತೆ ಜಯಲಲಿತಾ ಸರ್ಕಾರ ಕುತ್ತಿನಿಂದ ಪಾರಾಗಿದೆ. ಪ್ರಧಾನಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ಸೇರಿದ ಕೇಂದ್ರ ಸಚಿವ ಸಂಪುಟದ ಸಭೆ, ಸಂವಿಧಾನ ವಿರೋಧಿ ಕ್ರಮದ ಹಿನ್ನೆಲೆಯಲ್ಲಿ ಜಯಲಲಿತಾ ಸರ್ಕಾರಕ್ಕೆ ಎಚ್ಚರಿಕೆ ನೀಡುವಷ್ಟಕ್ಕೇ ಸುಮ್ಮನಾಗುವುದರೊಂದಿಗೆ ತಮಿಳುನಾಡಿನ ವಿದ್ಯಮಾನಗಳು ಹೆಚ್ಚುಕಮ್ಮಿ ತಣ್ಣಗಾದಂತಾಗಿದೆ.

ಈ ನಡುವೆ ಕೇಂದ್ರ ಸಚಿವರಾದ ಮುರಸೋಳಿ ಮಾರನ್‌ ಹಾಗೂ ಟಿ.ಆರ್‌. ಬಾಲು ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಿರುವ ತಮಿಳುನಾಡು ಸರ್ಕಾರ, ಸಚಿವರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ವಾಪಸ್ಸು ಪಡೆದಿದೆ. ಈ ನಿರ್ಧಾರದಿಂದಾಗಿಯೇ ಸಂಪುಟ ಸಭೆ ಜಯಲಲಿತಾ ಸರ್ಕಾರದ ವಿರುದ್ಧ ಮೆದು ಧೋರಣೆ ಅನುಸರಿಸಿರಲಿಕ್ಕೂ ಸಾಕು.

ಸಂಪುಟ ಸಭೆ ಕೈಗೊಂಡ ಇತರ ಮುಖ್ಯ ತೀರ್ಮಾನಗಳು ಇಂತಿವೆ-

  • ಜೂನ್‌ 30 ರಂದು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಬಂಧಿಸುವ ಸಮಯದಲ್ಲಿ ಒರಟಾಗಿ ನಡೆದುಕೊಂಡ ಪೊಲೀಸ್‌ ಅಧಿಕಾರಿಗಳನ್ನು ಗುರ್ತಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ.
  • ಕಾನೂನು, ಸಂವಿಧಾನ ವಿಧಿ- ವಿಧಾನ, ಮಾನವ ಹಕ್ಕು ಹಾಗೂ ಪತ್ರಿಕಾ ಸ್ವಾತಂತ್ರಗಳನ್ನು ದಮನ ಮಾಡಿದ ತಮಿಳುನಾಡು ಸರ್ಕಾರ, ಅವುಗಳನ್ನು ತಕ್ಷಣವೇ ಪುನರ್‌ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.
  • ಭವಿಷ್ಯದಲ್ಲಿ ಸಂವಿಧಾನ, ಮಾನವ ಹಕ್ಕು ಹಾಗೂ ಪತ್ರಿಕಾ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುವುದಿಲ್ಲ ಎನ್ನುವ ಬಗೆಗೆ ತಮಿಳುನಾಡು ಸರ್ಕಾರ ಖಾತರಿ ನೀಡಬೇಕು.
(ಇನ್ಫೋ ವಾರ್ತೆ)

ಮುಖಪುಟ / ತಮಿಳುನಾಡು ಬಿಕ್ಕಟ್ಟು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+