Get Updates
Get notified of breaking news, exclusive insights, and must-see stories!

ಕಡುಬಡವರಿಗೆ ಅನ್ನ ,‘ಅಂತ್ಯೋದಯ’ಯೋಜನೆಗೆ ಹಸಿರು ನಿಶಾನೆ

ಬೆಂಗಳೂರು : ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯದಲ್ಲಿನ 4.79 ಕಡುಬಡವ ಕುಟುಂಬಗಳಿಗೆ ತಿಂಗಳಿಗೆ 25 ಕೆ.ಜಿ. ಆಹಾರಧಾನ್ಯವನ್ನು ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಂತ್ಯೋದಯ ಅನ್ನ ಯೋಜನೆ’ ಮಂಗಳವಾರ ಪ್ರಾರಂಭವಾಯಿತು.

ಕಡು ಬಡವರ ಹಸಿವನ್ನು ಇಂಗಿಸಲು ರಾಜ್ಯ ಸರ್ಕಾರ ಹಮ್ಮಿಕೊಳ್ಳುವ ಇಂಥಾ ಯೋಜನೆಗಳಿಗೆ ಕೇಂದ್ರದ ನೆರವು ಸದಾ ಇರುತ್ತದೆ ಎಂದು ಯೋಜನೆಯನ್ನು ಉದ್ಘಾಟಿಸಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಶಾಂತಕುಮಾರ್‌ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಪ್ರಸ್ತುತ 6.04 ಕೋಟಿ ಟನ್‌ ಆಹಾರ ದಾಸ್ತಾನಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವ ದೃಷ್ಟಿಯಿಂದ ಪ್ರಧಾನಿ ವಾಜಪೇಯಿ ಈ ಮಹತ್ವದ ಯೋಜನೆಯನ್ನು ರೂಪಿಸಿದ್ದಾರೆ. ಇಡೀ ದೇಶದಲ್ಲಿ 1 ಕೋಟಿ ಕಡು ಬಡವರಿಗೆ ಈ ಯೋಜನೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಗಿದ್ದು , ಕರ್ನಾಟಕ ಈ ಯೋಜನೆಯನ್ನು ಪ್ರಾರಂಭಿಸುತ್ತಿರುವ 15 ನೇ ರಾಜ್ಯ ಎಂದು ಶಾಂತಕುಮಾರ್‌ ಹೇಳಿದರು.

ಕೇಂದ್ರದ ನೆರವಿಗೆ ಕೃಷ್ಣ ಕೃತಜ್ಞತೆ
ಕೋಟ್ಯಾಂತರ ಜನರಿಗೆ ನೆಮ್ಮದಿ ತರುವ ಯೋಜನೆಯಿದು ಎಂದು ಅಂತ್ಯೋದಯ ಅನ್ನ ಯೋಜನೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಣ್ಣಿಸಿದರು. ಕಳೆದ ವರ್ಷ ಮೆಕ್ಕೆಜೋಳದ ಅಧಿಕ ಉತ್ಪಾದನೆಯಾಗಿದ್ದಾಗ ರಾಜ್ಯದ ನೆರವಿಗೆ ಧಾವಿಸಿದ ಶಾಂತಕುಮಾರ್‌ ಅವರ ಸಹಾಯವನ್ನು ಕೃಷ್ಣ ಸ್ಮರಿಸಿದರು.

ಕೇಂದ್ರ ಸಚಿವ ವಿ. ಶ್ರೀನಿವಾಸಪ್ರಸಾದ್‌, ವಿಧಾನ ಪರಿಷತ್‌ನ ವಿರೋಧಿ ಮುಖಂಡ ಕೆ.ಹೆಚ್‌. ಶ್ರೀನಿವಾಸ್‌, ರಾಜ್ಯ ಆಹಾರ ಸಚಿವ ಡಿ.ಬಿ. ಇನಾಂದಾರ್‌ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+