Get Updates
Get notified of breaking news, exclusive insights, and must-see stories!

ತಮಿಳುನಾಡಿನ ಮೇಲೆ 355 ಅಥವಾ 356 ನೇ ವಿಧಿ ಪ್ರಯೋಗ

ನವದೆಹಲಿ : ತಮಿಳುನಾಡು ವಿದ್ಯಮಾನಗಳ ಬಗ್ಗೆ ಚರ್ಚಿಸಲು ಸೋಮವಾರ ಸಂಜೆ 6.30 ಕ್ಕೆ ಸೇರುವ ಕೇಂದ್ರ ಸಂಪುಟ ಸಭೆ ತಮಿಳುನಾಡಿನ ಮೇಲೆ ಸಂವಿಧಾನದ 355 ಅಥವಾ 356 ನೇ ವಿಧಿಗಳನ್ನು ಪ್ರಯೋಗಿಸುವ ನಿರೀಕ್ಷೆಯಿದೆ.

355 ನೇ ವಿಧಿಯನ್ವಯ ಕೇಂದ್ರ ಸಚಿವರಾದ ಮುರಸೋಳಿ ಮಾರನ್‌ ಹಾಗೂ ಟಿ.ಆರ್‌. ಬಾಲು ಅವರ ಬಿಡುಗಡೆಗೆ ಕೇಂದ್ರ ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಆದೇಶ ನೀಡಬಹುದಾಗಿದೆ. 356 ನೇ ವಿಧಿಯನ್ವಯ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬಹುದು.

ಎನ್‌ಡಿಎ ಸಮಿತಿಯ ವರದಿ ಮಾತ್ರವಲ್ಲದೆ, ಗೃಹ ಕಾರ್ಯದರ್ಶಿ ಎಂ.ಬಿ. ಕೌಶಲ್‌ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ವಾಜಪೇಯಿ ನೇತೃತ್ವದ ಸಂಪುಟ ಸಭೆ ಪರಿಶೀಲಿಸುವುದು. ತಮಿಳುನಾಡು ವಿದ್ಯಮಾನಗಳ ಅಧ್ಯಯನಕ್ಕಾಗಿ ಚೆನ್ನೈಗೆ ತೆರಳಿದ್ದ ಕೌಶಲ್‌ ನೇತೃತ್ವದ ಸಮಿತಿ ಜುಲೈ 1 ಭಾನುವಾರದ ರಾತ್ರಿ ದೆಹಲಿಗೆ ವಾಪಸ್ಸಾಗಿದ್ದು , ಪ್ರಧಾನಿಗೆ ತನ್ನ ವರದಿಯನ್ನು ಸಲ್ಲಿಸಿದೆ.

ಪ್ರಜಾಪ್ರಭುತ್ವದ ಕಗ್ಗೊಲೆ- ಜೇಟ್ಲಿ
ಜಾರ್ಜ್‌ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿರುವ ಕೇಂದ್ರ ಕಾನೂನು ಸಚಿವ ಅರುಣ್‌ ಜೇಟ್ಲಿ - ‘ತಮಿಳುನಾಡಿನ ವಿದ್ಯಮಾನಗಳು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಬಣ್ಣಿಸಿದ್ದಾರೆ. ನಾವು ಪಡೆದಿರುವ ವರದಿಗಳಿಂದ ರಾಜ್ಯದಲ್ಲಿ ಭಯೋತ್ಪಾದಕತೆ ತಾಂಡವವಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಜೇಟ್ಲಿ ಹೇಳಿದರು.

356 ನೇ ವಿಧಿಯನ್ನು ಯಾವಾಗ ಬಳಸಬಹುದು -
ಸಂವಿಧಾನ ತಜ್ಞ ಡಾ. ಸುಭಾಷ್‌ ಕಶ್ಯಪ್‌ ಅವರ ಪ್ರಕಾರ ಸಂವಿಧಾನದ 356 ನೇ ವಿಧಿ ಎಂಬುದೊಂದು ಬ್ರಹ್ಮಾಸ್ತ್ರ . ಎಲ್ಲ ಪ್ರಯತ್ನಗಳೂ ವಿಫಲವಾದಾಗಷ್ಟೇ 356 ನೇ ವಿಧಿಯನ್ನು ಬಳಸಬಹುದು. ದುರಾದೃಷ್ಟವಶಾತ್‌ ಕಳೆದ 50 ವರ್ಷಗಳಲ್ಲಿ 356 ನೇ ವಿಧಿ ಅನೇಕ ಬಾರಿ ದುರುಪಯೋಗವಾಗಿದೆ. 356 ನೇ ವಿಧಿಯನ್ನು ಪ್ರಯೋಗಿಸುವ ಮುನ್ನ 256, 257 ಹಾಗೂ 355 ನೇ ವಿಧಿಗಳನ್ನು ಬಳಸಬೇಕು ಎನ್ನುವುದು ಕಶ್ಯಪ್‌ರ ಅಭಿಮತ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+