ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾಲ್ಬಾಗ್ ಮುಂಜಾನೆ ವಾಯು ವಿಹಾರಿಗಳಿಗೆಪ್ರವೇಶ ಶುಲ್ಕ ರದ್ದು
ಬೆಂಗಳೂರು : ಇಲ್ಲಿ ಆಮ್ಲಜನಕ ಉಚಿತ ! ನುಡಿ ನಿಜವಾಗಿದೆ. ಮುಂಜಾನೆಯ ವಾಯುವಿಹಾರಿಗಳಿಗೆ ಲಾಲ್ಬಾಗ್ ಪ್ರವೇಶಕ್ಕೆ ಹೇರಿದ್ದ 1 ರುಪಾಯಿ ಶುಲ್ಕವನ್ನು ತೋಟಗಾರಿಕೆ ಇಲಾಖೆ ವಾಪಸ್ಸು ಪಡೆದಿದೆ.
ಪ್ರವೇಶ ಶುಲ್ಕವನ್ನು ವಾಪಸ್ಸು ಪಡೆಯುವಂತೆ ಮುಂಜಾನೆ ವಾಯು ವಿಹಾರಾರ್ಥಿಗಳು ನಡೆಸಿದ ಪ್ರತಿಭಟನೆಗೆ ಮಣಿದಿರುವ ತೋಟಗಾರಿಕೆ ಇಲಾಖೆ, ಶುಲ್ಕವನ್ನು ವಾಪಸ್ಸು ಪಡೆದಿರುವುದಾಗಿ ಪ್ರಕಟಿಸಿದೆ. ಪ್ರವೇಶ ಶುಲ್ಕವನ್ನು ವಾಪಸ್ಸು ಪಡೆಯುವಂತೆ ತೋಟಗಾರಿಕಾ ಸಚಿವ ಅಲ್ಲಂ ವೀರಭದ್ರಪ್ಪ ಅವರು ನೀಡಿದ ಸೂಚನೆಯ ಮೇರೆಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
1999 ರಲ್ಲೂ ಇದೇ ರೀತಿ ವಾಯು ವಿಹಾರಿಗಳಿಗೆ ಪ್ರವೇಶ ಶುಲ್ಕವನ್ನು ಹೇರಿದ್ದ ಸರ್ಕಾರ, ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶುಲ್ಕ ವಾಪಸ್ಸು ಪಡೆದಿತ್ತು . ಈಗ ಇತಿಹಾಸ ಮರುಕಳಿಸಿದೆ. ಸಾರ್ವಜನಿಕರ ಮನವಿಗೆ ಪುರಸ್ಕಾರ ನೀಡಿರುವ ತೋಟಗಾರಿಕಾ ಸಚಿವರನ್ನು ಶಾಸಕ ರಾಮಲಿಂಗಾರೆಡ್ಡಿ ಅಭಿನಂದಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Saturday, June 30, 2001, 5:30 [IST]