Get Updates
Get notified of breaking news, exclusive insights, and must-see stories!

ಸೋಮವಾರ ತಮಿಳುನಾಡು ಬಂದ್‌, ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ

ಚೆನ್ನೈ : ಡಿಎಂಕೆ ಧುರೀಣ ಎಂ. ಕರುಣಾನಿಧಿ ಅವರ ಬಂಧನವನ್ನು ಪ್ರತಿಭಟಿಸಿ ಜುಲೈ 2 ರ ಸೋಮವಾರ ತಮಿಳುನಾಡು ಬಂದ್‌ಗೆ ಡಿಎಂಕೆ ಮೈತ್ರಿಕೂಟ ಕರೆ ಕೊಟ್ಟಿದೆ ಹಾಗೂ ಸಂವಿಧಾನದ 356 ನೇ ವಿಧಿಯನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಚೆನ್ನೈನ ಡಿಎಂಕೆ ಮುಖ್ಯ ಕಚೇರಿಯಲ್ಲಿ ಶನಿವಾರ ನಡೆದ ತುರ್ತು ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಅನ್ಬಳಗನ್‌ ಈ ವಿಷಯ ತಿಳಿಸಿದರು. ಜಯಲಲಿತಾ ನೇತೃತ್ವದ ಸರ್ಕಾರದ ಅರಣ್ಯ ಆಳ್ವಿಕೆಯಿಂದ ರಾಜ್ಯದಲ್ಲಿ ಅರಾಜಕತೆ ಉಂಟಾಗಿದ್ದು ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ ಎಂದು ಅವರು ಹೇಳಿದರು.

ರಾಜ್ಯದ ಎನ್‌ಡಿಎ ನಿಯೋಗವೊಂದು ಸದ್ಯದಲ್ಲಿಯೇ ರಾಷ್ಟ್ರಪತಿ ಕೆ.ಆರ್‌.ನಾರಾಯಣನ್‌ ಹಾಗೂ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಅನ್ಬಳಗನ್‌ ಹೇಳಿದರು. ಈ ನಡುವೆ ತಮಿಳುನಾಡಿನಲ್ಲಿನ ವಿದ್ಯಮಾನಗಳ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ತುರ್ತು ಸಭೆ ಕರೆದಿದೆ.

ಅಂಜುವುದಿಲ್ಲ , ಹೋರಾಟಕ್ಕೆ ಸಿದ್ಧ
ನ್ಯಾಯಾಂಗ ಹೋರಾಟಕ್ಕೆ ಸಿದ್ಧವಾಗಿರುವುದಾಗಿ ಪ್ರಕಟಿಸಿರುವ ಕರುಣಾನಿಧಿ ಪುತ್ರ ಹಾಗೂ ಚೆನ್ನೈ ಮೇಯರ್‌ ಸ್ಟಾಲಿನ್‌, ಜಯಲಲಿತಾ ಅವರ ದಬ್ಬಾಳಿಕೆಗೆ ತಾವು ಅಂಜುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ತಾನ್ಸಿ ಮುಂತಾದ ಪ್ರಕರಣಗಳಲ್ಲಿ ತಮ್ಮ ವಿರುದ್ಧ ಬಂದಿರುವ ತೀರ್ಪುಗಳನ್ನು ಮರೆ ಮಾಚಲು ಹಾಗೂ ತಮ್ಮ ಭ್ರಷ್ಟಾಚಾರ ಕರ್ಮಕಾಂಡಗಳನ್ನು ಮುಚ್ಚಿಹಾಕುವ ಸಂಚಿನಿಂದ ಮುಖ್ಯಮಂತ್ರಿ ಜಯಲಲಿತಾ ಪ್ರತೀಕಾರ ಕ್ರಮಕ್ಕೆ ಇಳಿದಿದ್ದಾರೆ ಎಂದು ಸ್ಟಾಲಿನ್‌ ಆಪಾದಿಸಿದ್ದಾರೆ.

ಕಲ್ಲು ತೂರಾಟ, ಚೆನ್ನೈನಲ್ಲಿ ಬಿಗು ವಾತಾವರಣ
ಕರುಣಾನಿಧಿಯವರನ್ನು ಇರಿಸಿರುವ ಚೆನ್ನೈನ ಸೆಂಟ್ರಲ್‌ ಜೈಲ್‌ ಮುಂಭಾಗ ಡಿಎಂಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಈ ನಡುವೆ ಚೆನ್ನೈನಲ್ಲಿ ಉದ್ರಿಕ್ತ ಪರಿಸ್ಥಿತಿ ಮುಂದುವರಿದಿದೆ. ಅಲ್ಲಲ್ಲಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಕಲ್ಲು ತೂರಾಟದಿಂದ ಅನೇಕ ವಾಹನಗಳು ಜಖಂಗೊಂಡಿದ್ದು , ಕೆಲವರು ಗಾಯಗೊಂಡಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+