ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿ ಕೃಷ್ಣ ಸಂಪೂರ್ಣ ಆರೋಗ್ಯ- ಮಲ್ಯ ಆಸ್ಪತ್ರೆ ವೈದ್ಯರು
ಬೆಂಗಳೂರು : ಆರೋಗ್ಯ ತಪಾಸಣೆಗಾಗಿ ಬುಧವಾರ ಸಂಜೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಮಲ್ಯ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬುಧವಾರ ಸಂಜೆ ಮುಂಬಯಿಯಿಂದ ಹಿಂತಿರುಗಿದ ಮುಖ್ಯಮಂತ್ರಿಗಳು ಏಕಾಏಕಿ ಆಸ್ಪತ್ರೆಗೆ ದಾಖಲಾದ ಕಾರಣ, ಅವರ ಆರೋಗ್ಯದ ಬಗ್ಗೆ ವದಂತಿಗಳು ಉಂಟಾಗಿದ್ದ ವು. ಎಲ್ಲ ಶಂಕೆಗಳನ್ನು ವೈದ್ಯರು ಸ್ಪಷ್ಟವಾಗಿ ಅಲ್ಲಗಳೆದಿದ್ದು , ಕೃಷ್ಣ ಸಂಪೂರ್ಣ ಆರೋಗ್ಯವಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಎಲ್ಲ ರೀತಿಯ ತಪಾಸಣೆಗಳಿಗೆ ಒಳಪಡಿಸಲಾಗಿದೆ. ಅವರ ದೇಹಸ್ಥಿತಿ ಮಾಮೂಲಿನಂತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದು , ಸೋಮವಾರದಿಂದ ತಮ್ಮ ದೈನಂದಿನ ಕಾರ್ಯಭಾರದಲ್ಲಿ ಕೃಷ್ಣ ಅವರು ತೊಡಗಬಹುದಾಗಿದೆ ಎಂದೂ ವೈದ್ಯರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Thursday, June 28, 2001, 5:30 [IST]