ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿದ್ಯುತ್ ತಂತಿಗೆ ಹದಿನೈದು ದಿನಗಳಲ್ಲಿ 5 ಆನೆಗಳ ಬಲಿ
ಮೈಸೂರು : ಚಾಮರಾಜನಗರ ಅಟ್ಟಗುಳಿಪುರದ ಸಮೀಪ ಸುವರ್ಣವತಿ ಬಲದಂಡೆ ನಾಲೆಯ ಬಳಿ ಜಮೀನೊಂದರ ವಿದ್ಯುತ್ ತಂತಿಬೇಲಿಗೆ ಗರ್ಭ ಧರಿಸಿದ 50 ವರ್ಷ ವಯಸ್ಸಿನ ಆನೆಯಾಂದು ಮಂಗಳವಾರ ಸಂಜೆ ಬಲಿಯಾಗಿದೆ. ವಿದ್ಯುತ್ ತಂತಿಗೆ ಕಳೆದ 15 ದಿನಗಳಲ್ಲಿ ಬಲಿಯಾದ 5 ನೇ ಆನೆಯಿದು.
ಕಬ್ಬಿನ ಬೆಳೆ ರಕ್ಷಿಸಿಕೊಳ್ಳಲು ಜಮೀನಿನ ಸುತ್ತ ಹಾಕಿದ್ದ ತಂತಿಬೇಲಿಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ಪರಿಣಾಮವಾಗಿ ಈ ಆನೆಗಳು ಸತ್ತಿವೆ. ಚಾಮಯ್ಯ ಎಂಬುವರಿಗೆ ಸೇರಿದ ಈ ಜಮೀನನ್ನು ಪ್ರಸ್ತುತ ಕಣ್ಣಯ್ಯ ಎಂಬಾತ ಗುತ್ತಿಗೆಗೆ ಪಡೆದು ಕೃಷಿ ನಿರತನಾಗಿದ್ದಾನೆ.
(ಇನ್ಫೋ ವಾರ್ತೆ)
Comments
Story first published: Wednesday, June 27, 2001, 5:30 [IST]