Get Updates
Get notified of breaking news, exclusive insights, and must-see stories!

ಕ್ಷಮಾದಾನ ನೀಡಿದರೆ ವೀರಪ್ಪನ್‌ ಶರಣಾಗಲು ಸಿದ್ಧ : ಮಣಿಕಂಠನ್‌

ಬೆಂಗಳೂರು: ಕಾಡುಗಳ್ಳನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ವಾಲ್ಟರ್‌ ಥೇವಾರಂ ವೀರಪ್ಪನ್‌ನನ್ನು ಹಿಡಿಯುತ್ತಾರೋ, ಕೊಲ್ಲುತ್ತಾರೋ, ಇಲ್ಲವೇ ವೀರಪ್ಪನ್‌ನೇ ಶರಣಾಗತನಾಗುತ್ತಾನೋ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಆದರೆ, ವೀರಪ್ಪನ್‌ನನ್ನು ಶರಣಾಗಿಸುವ ಪ್ರಯತ್ನಗಳು ಮಾತ್ರ ನಡೆಯುತ್ತಿವೆ ಎಂಬ ಸುಳಿವು ಸಿಕ್ಕಿದೆ.

ಪಟ್ಟಳಿ ಮಕ್ಕಳ ಕಚ್ಚಿ ರಾಮದಾಸ್‌ ಅವರ ಮೂಲಕ ಮೊದಲು ವೀರಪ್ಪನ್‌ ಮನವೊಲಿಸಿ ಶರಣಾಗುವಂತೆ ಮಾಡುವ ಪ್ರಯತ್ನ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ವೀರಪ್ಪನ್‌ ಇದಕ್ಕೆ ಒಪ್ಪದಿದ್ದರೆ, ತೀವ್ರ ಕಾರ್ಯಾಚರಣೆ ನಡೆಯುವುದು ಶತಃಸಿದ್ಧ. ಈಗಾಗಲೇ ಕರ್ನಾಟಕ ಕಾರ್ಯಪಡೆ ಮೆಟ್ಟೂರು ಅರಣ್ಯ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ಆರಂಭಿಸಿದೆ.

ಈ ಮಧ್ಯೆ ವೆಲ್ಲಿತಿರಪೂರ್‌ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವೀರಪ್ಪನ್‌ ಸಹಚರನಾಗಿದ್ದ ಎಸ್‌.ಎ. ಮಣಿಕಂಠನ್‌ ಕೂಡ ಕ್ಷಮಾದಾನ ನೀಡುವುದಾದರೆ, ವೀರಪ್ಪನ್‌ ಶರಣಾಗಲು ಸಿದ್ಧನಾಗಿದ್ದಾನೆ ಎಂಬ ಹೇಳಿಕೆ ನೀಡಿದ್ದಾನೆ.

ವೀರಪ್ಪನ್‌ನನ್ನು ಹಿಡಿಯಲು ಕೋಟ್ಯಂತರ ರುಪಾಯಿ ಖರ್ಚು ಮಾಡುವ ಬದಲು ಕಾನೂನಿನ ಚೌಕಟ್ಟಿನಲ್ಲಿ ಆತನಿಗೆ ಕ್ಷಮಾದಾನ ನೀಡುವ ಬಗ್ಗೆ ಚಿಂತಿಸಿ, ಹತ್ತಾರು ವರ್ಷಗಳ ಈ ಸಮಸ್ಯೆಗೆ ಮಂಗಳ ಹಾಡಬೇಕು ಎಂದು ಮಣಿಕಂಠನ್‌ ಸಲಹೆ ನೀಡಿದ್ದಾನೆ. ವೀರಪ್ಪನ್‌ ಶರಣಾಗಲು ಸಿದ್ಧನಾಗಿದ್ದಾನೆ. ಹೀಗಾಗೇ ಅವನು ಯಾವುದೇ ದಾಳಿ ನಡೆಸುತ್ತಿಲ್ಲ ಎಂದೂ ಮಣಿಕಂಠನ್‌ ಹೇಳಿದ್ದಾನೆ.

ಕೊಳತ್ತೂರು ಮಣಿ ಬಂಧನ: ವೀರಪ್ಪನ್‌ ಡಾ. ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದ ಸಂದರ್ಭದಲ್ಲಿ ನೆಡುಮಾರನ್‌ ಜೊತೆ ಕಾಡಿಗೆ ಸಂಧಾನಕ್ಕೆ ತೆರಳಿದ್ದ ಪೆರಿಯಾರ್‌ ದ್ರಾವಿಡ ಕಳಗಂನ ಮುಖ್ಯಸ್ಥ ಕೊಳತ್ತೂರು ಮಣಿ ಅವರನ್ನು ಸೋಮವಾರ ರಾತ್ರಿ ತಮಿಳುನಾಡಿನಲ್ಲಿ ಬಂಧಿಸಿಲಾಗಿದೆ.

ಮಂಗಳವಾರ ಮಣಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಈಗ ಮಣಿ 15 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಲ್‌.ಟಿ.ಟಿ.ಇ, ಟಿಎನ್‌ಎಲ್‌ಎ ಹಾಗೂ ಟಿಎನ್‌ಎಲ್‌ಎಫ್‌ ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಣಿ ಅವರನ್ನು ಬಂಧಿಸಲಾಗಿದೆ.

ಅಪರಾಧಿಗಳಿಗೆ ರಕ್ಷಣೆ ನೀಡಿದ, ಪ್ರಚೋದನಕಾರಿ ಹೇಳಿಕೆ ನೀಡಿದ ಹಾಗೂ ದೇಶದ ಕಾನೂನು ಉಲ್ಲಂಘಿಸಿದ ಆರೋಪಗಳನ್ನೂ ಮಣಿ ಎದುರಿಸುತ್ತಿದ್ದಾರೆ. ಆದರೆ, ಡಾ. ರಾಜ್‌ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಣಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಳ ನೆಡುಮಾರನ್‌ ಒತ್ತಾಯಿಸಿದ್ದಾರೆ.

ವಿಚಾರಣೆ ಇಲ್ಲ : ಈ ಮಧ್ಯೆ ನರಹಂತಕನ ಒತ್ತೆಯಾಳಾಗಿದ್ದ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಅವರನ್ನು ಬಂಧನದಿಂದ ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಾನು, ರಾಮ್‌ಗೋಪಾಲ್‌, ಷಣ್ಮುಖ ಸುಂದರಂ, ರಾಘವೇಂದ್ರ ಶಾಸ್ತ್ರೀ ಹಾಗೂ ಇತರರನ್ನು ಕರ್ನಾಟಕ ಪೊಲೀಸರು ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ. ಈ ವಿಷಯವನ್ನು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಡಾ. ಕೆ. ಶ್ರೀನಿವಾಸನ್‌ ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+