ಸೋಲಾರ್ ವಿದ್ಯುತ್ ಸಂಶೋಧನೆಯಲ್ಲಿ ಧಾರವಾಡ ವಿಜ್ಞಾನಿಯ ವಿಕ್ರಮ
ಬೆಂಗಳೂರು : ಅಮೆರಿಕಾದ ಪರ್ಡ್ಯೂ ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಧಾರವಾಡದ ಡಾ. ಶ್ರೀಪಾದ್ ರೇವಣಕರ್, ಸೋಲಾರ್ ಆಧಾರಿತ ಉಪಕರಣ ಪರೀಕ್ಷೆಗಾಗಿ ಹೊಸ ವಿಧಾನವೊಂದನ್ನು ಕಂಡುಹಿಡಿದಿದ್ದಾರೆ.
ಈ ಹೊಸ ವಿಧಾನದ ಸಹಾಯದಿಂದ ಅಮೆರಿಕನ್ ಸ್ಪೇಸ್ ಏಜೆನ್ಸಿ ಮತ್ತು ನಾಸಾಗೆ ಮಿಲಿಯನ್ಗಟ್ಟಲೆ ಡಾಲರ್ ಹಣ ಉಳಿತಾಯವಾಗಲಿದೆ. ಬಾಹ್ಯಾಕಾಶದಲ್ಲಿ ಸೋಲಾರ್ ಆಧಾರಿತ ಉಪಕರಣಗಳ ಪರೀಕ್ಷೆಗೆ ತಗಲುವ ವೆಚ್ಚಕ್ಕಿಂತ ತುಂಬಾ ಕಡಿಮೆ ಖರ್ಚಿನಲ್ಲಿ ಭೂಮಿ ಮೇಲೆಯೇ ಪರೀಕ್ಷೆ ನಡೆಸಬಹುದು ಎಂದು ರೇವಣಕರ್ ತೋರಿಸಿಕೊಟ್ಟಿದ್ದು, ವಿಜ್ಞಾನಿಗಳ ವಲಯ ರೇವಣಕರ್ ಸಾಧನೆಯನ್ನು ಶ್ಲಾಘಿಸಿದೆ.
ಹೊಸ ಅನ್ವೇಷಣೆಯು ಭೂಮಿಯ ಮಾದರಿಯಲ್ಲಿರುವ ಉಪಗ್ರಹಗಳಿಗೆ ಉಪಯುಕ್ತವಾಗಿದ್ದು, ಈ ವಿಧಾನದ ಮೂಲಕ ಸೋಲಾರ್ ಆಧಾರಿತ ಉಪಕರಣ ಕತ್ತಲಲ್ಲೂ ವಿದ್ಯುತ್ ಉತ್ಪಾದಿಸಬಲ್ಲುದು. ವಿಧಾನದಲ್ಲಿ ದೊಡ್ಡ ಗಾತ್ರ ಮತ್ತು ಸಾಮರ್ಥ್ಯದ ಬ್ಯಾಟರಿಗಳನ್ನು ಬಳಸಬೇಕಾಗಿಲ್ಲ. ಇದೇ ಪ್ರಯೋಗವನ್ನು ಪ್ರಯೋಗಾಲಯದಲ್ಲಿ ಹತ್ತು ಸಾವಿರಕ್ಕೂ ಕಡಿಮೆ ಡಾಲರ್ ವೆಚ್ಚದಲ್ಲಿ ನಡೆಸಿದ್ದೇನೆ ಎನ್ನುತ್ತಾರೆ ರೇವಣಕರ್.
ಪ್ರಸ್ತುತ ರೇವಣಕರ್ ಅಮೆರಿಕಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯರ್ ಇಂಜಿನಿಯರಿಂಗ್ನ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರೇವಣಕರ್ ಅವರ ‘ಫೇಸ್ಚೇಂಜ್ ಸೋಲಾರ್ ಎನರ್ಜಿ ಸಿಸ್ಟಮ್’, ಫೇಸ್ ಚೇಂಜ್ ಮೆಟೀರಿಯಲ್ ತತ್ವದ ಪ್ರಕಾರ ಕೆಲಸ ನಿರ್ವಹಿಸುತ್ತದೆ.
ಕನ್ನಡ ಮಾಧ್ಯಮದಲ್ಲಿ ಓದಿರುವ ರೇವಣಕರ್ ಅವರು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ವಿದ್ಯಾರ್ಥಿ. ನಂತರ ನ್ಯೂಕ್ಲಿಯರ್ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೆರಿಕಾಕ್ಕೆ ತೆರಳಿದವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications