ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷರಾಗಿ ಪಿ.ಟಿ.ಐ. ಸಿದ್ಧರಾಜು
ಬೆಂಗಳೂರು : ಪತ್ರಕರ್ತರ ಪ್ರಮುಖ ಸಂಘಟನೆಯಾದ ಬೆಂಗಳೂರು ಪ್ರೆಸ್ಕ್ಲಬ್ನ 2001-02ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗಾಗಿ ಜೂನ್ 24ರ ಭಾನುವಾರ ನಡೆದ ಚುನಾವಣೆಯಲ್ಲಿ ಪಿ.ಟಿ.ಐ.ನ ಮುಖ್ಯ ವರದಿಗಾರ ಎಂ. ಸಿದ್ದರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇಂಟರ್ನೆಟ್ ಪತ್ರಿಕೋದ್ಯಮದ ಹಲವು ಮಂದಿ ಪತ್ರಕರ್ತರು ಪದಾಧಿಕಾರಿಗಳಾಗಿ ಆಯ್ಕೆಯಾಗಿರುವುದು ಈ ಬಾರಿಯ ವಿಶೇಷ. ಕನ್ನಡ.ಇಂಡಿಯಾಇನ್ಫೋ.ಕಾಂನ ಸಹ ಸಂಪಾದಕ ಎಸ್.ಕೆ. ಶಾಮಸುಂದರ ಕಾರ್ಯದರ್ಶಿಯಾಗಿ ಜಯಭೇರಿ ಬಾರಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಣಿ.ನೆಟ್ನ ಎಂ.ಎ. ಪೊನ್ನಪ್ಪ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಉದಯ ಟಿ.ವಿ.ಯ ಬಿ.ಎಸ್. ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2001-- 02ನೇ ಸಾಲಿನ ನೂತನ ಪದಾಧಿಕಾರಿಗಳು :
ಅಧ್ಯಕ್ಷ : ಎಂ. ಸಿದ್ಧರಾಜು - ಪಿ.ಟಿ.ಐ
ಉಪಾಧ್ಯಕ್ಷರು : ಗಂಗಾಧರ ಮೊದಲಿಯಾರ್ - ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, June 25, 2001, 5:30 [IST]