ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲಿಗರ ಏಳಿಗೆಗೆ ಶ್ರಮಿಸಿದ ಡಾ. ಸುದರ್ಶನ್‌ಗೆ ಥಾಮಸ್‌ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ವಿಜಿಲ್‌ ಇಂಡಿಯಾ ಮೂವೆಂಟ್‌ ಸಂಸ್ಥೆಯು ನೀಡುತ್ತಿರುವ ಡಾ. ಎಂ. ಎ. ಥಾಮಸ್‌ ಪ್ರಶಸ್ತಿಗೆ ಡಾ. ಎಚ್‌. ಸುದರ್ಶನ್‌ ಆಯ್ಕೆಯಾಗಿದ್ದಾರೆ.

ಎಂ.ಎ. ಥಾಮಸ್‌ ಪ್ರಶಸ್ತಿ ಮಾನವ ಹಕ್ಕುಗಳ ಪುರಸ್ಕಾರವಾಗಿದ್ದು, ಗುಡ್ಡಗಾಡು ಸೋಲಿಗ ಜನಾಂಗದ ಏಳಿಗೆಗೆ ಶ್ರಮಿಸಿದ ಡಾ. ಸುದರ್ಶನ್‌ ಅವರಿಗೆ ಇದನ್ನು ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಸನ್ಮಾನ ಪತ್ರವನ್ನೊಳಗೊಂಡಿರುತ್ತದೆ.

ವಿಜಿಲ್‌ ಇಂಡಿಯಾ ಮೂಮೆಂಟ್‌ ಸಂಸ್ಥೆಯ ಟ್ರಸ್ಟಿ , ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ಮೂರ್ತಿ ಭಾನುವಾರ ಈ ಪ್ರಶಸ್ತಿಯನ್ನು ಪ್ರಕಟಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್‌ 10ರಂದು ನಗರದಲ್ಲಿ ಆಯೋಜಿಸಲಾಗಿದೆ. ಈವರೆಗೆ ಈ ಪ್ರಶಸ್ತಿಯನ್ನು ಪಡೆದುಕೊಂಡವರಲ್ಲಿ ನ್ಯಾಯಮೂರ್ತಿ ವಿ.ಎಂ. ತಾರ್ಕುಂಡೆ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌, ನ್ಯಾಯಮೂರ್ತಿ ವಿ. ಆರ್‌. ಕೃಷ್ಣ ಅಯ್ಯರ್‌ ಅವರೂ ಸೇರಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X